Advertisement

ಮಣಿಪಾಲ: ಗಾಂಜಾ ಸಹಿತ ಮೂವರು ವಶಕ್ಕೆ

10:38 PM Jul 18, 2023 | Team Udayavani |

ಮಣಿಪಾಲ: ಇಲ್ಲಿನ ಶೀಂಬ್ರ ಸೇತುವೆ ಬಳಿ ಗಾಂಜಾ ಮಾರಲು ಯತ್ನಿಸುತ್ತಿದ್ದ ಕಾಪುವಿನ ಮುಝಾಮಿಲ್‌ ಹಾಗೂ ಮಹಮ್ಮದ್‌ ಪಾಝಿಲ್‌, ಮಂಗಳೂರಿನ ಶಿಯಾಬ್‌ ಮಾಣಿ, ಉಡುಪಿಯ ಡಯಾನ ಟಾಕೀಸ್‌ ಬಳಿಯ ಸಾಹಿಲ್‌, ಬೈಂದೂರಿನ ರಿಜ್ವಾನ್‌ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಅವರಿಂದ 250 ಗ್ರಾಂ ಗಾಂಜಾ, ಕಾರು, ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾವನ್ನು ಶಿಯಾಬ್‌ ಹಾಗೂ ಸಾಹಿಲ್‌ ಅವರು ರಿಜ್ವಾನ್‌ ಇತರರಿಗೆ ಮಾರ‌ಲು ತಂದಿದ್ದರು ಎನ್ನಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next