Advertisement

ಮಣಿಪಾಲ: ಅನುಮಾನಕ್ಕೆ ಎಡೆಮಾಡಿದ ಕಾರು; ವಾರಸುದಾರರ ಪತ್ತೆಹಚ್ಚಿದ ಪೊಲೀಸರು

10:53 PM Nov 15, 2020 | mahesh |

ಉಡುಪಿ: ಮಣಿಪಾಲ ಸಮೀಪದ ಕೆಳಪರ್ಕಳದ ಗೋಪಾಲ ಕೃಷ್ಣ ದೇವಸ್ಥಾನದ ರಸ್ತೆ ಬದಿಯ ಗದ್ದೆಯಲ್ಲಿ ಎರಡು ದಿನಗಳಿಂದ ನಿಂತಿದ್ದ ಕಾರೊಂದು ಹಲವು ಅನುಮಾನಗಳಿಗೆ ಎಡೆಮಾಡಿದ್ದು, ಇದೀಗ ಅದನ್ನು ಭೇದಿಸಿರುವ ಪೊಲೀಸರು ಕಾರಿನ ವಾರಸುದಾರರನ್ನು ಪತ್ತೆ ಹಚ್ಚಿದ್ದಾರೆ.

Advertisement

ಕೇರಳ ತಿರುವನಂತಪುರ ನೋಂದಣಿಯ ಮಾರುತಿ ಎ ಸ್ಟಾರ್‌ ಕಾರು ಕಳೆದ ಎರಡು ದಿನ ಗದ್ದೆಯಲ್ಲಿ ನಿಗೂಢ ರೀತಿಯಲ್ಲಿ ನಿಂತಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ವಿವಿಧ ರೀತಿಯ ಅನುಮಾನಗಳು ಹುಟ್ಟಿಕೊಂಡಿದ್ದವು.

ರವಿವಾರ ಮಣಿಪಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾರಿನ ನೋಂದಣಿ ಸಂಖ್ಯೆಯ ಮೂಲಕ ವಾರಸುದಾರರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಮಣಿಪಾಲದ ವಿದ್ಯಾರ್ಥಿಯೊಬ್ಬ ಕಾರನ್ನು ಹಿಮ್ಮುಖವಾಗಿ ತೆಗೆಯುವ ವೇಳೆ ಕಾರು ನಿಯಂತ್ರಣ ತಪ್ಪಿ ಗದ್ದೆಗೆ ಚಲಿಸಿಕೊಂಡು ಹೋಗಿದೆ. ವಿದ್ಯಾರ್ಥಿಯನ್ನು ಠಾಣೆಗೆ ಕರೆಸಿ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆ ಒತ್ತಡ ಹಾಗೂ ರಾತ್ರಿಯಾದ ಕಾರಣ ಆತ ಕಾರನ್ನು ಅಲ್ಲೇ ಬಿಟ್ಟು ತೆರಳಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಯು ಸೋಮವಾರದೊಳಗೆ ಕಾರನ್ನು ತೆಗೆಯುವುದಾಗಿ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next