Advertisement

Manipal-Statebank: ಎಸಿ ಬದಲು ನಾನ್‌ ಎಸಿ ಬಸ್‌ ಸಂಚಾರ

10:29 AM Feb 09, 2024 | Team Udayavani |

ಮಂಗಳೂರು: ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲ ನಡುವೆ ಕಾರ್ಯಾಚರಿಸುತ್ತಿದ್ದ ಹವಾನಿಯಂತ್ರಿತ ಕೆಎಸ್ಸಾರ್ಟಿಸಿ ಬಸ್‌ಗಳ ಬದಲು ಕರ್ನಾಟಕ ಸಾರಿಗೆ ಬಸ್‌ ಓಡಾಟ ಆರಂಭವಾಗಿದ್ದು, ಮಣಿಪಾಲ – ಉಡುಪಿ-ಸ್ಟೇಟ್‌ಬ್ಯಾಂಕ್‌ ಮತ್ತು ಉಡುಪಿ-ಮಂಗಳೂರು (ಬಿಜೈ) ರೂಟ್‌ಗಳಲ್ಲಿ ಪ್ರತ್ಯೇಕ ಬಸ್‌ಗಳು ಸಂಚರಿಸುತ್ತಿವೆ.

Advertisement

ಈ ಹಿಂದೆ ಮಂಗಳೂರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 4 ವೋಲ್ವೋ ಬಸ್‌ಗಳು ಸಂಚರಿಸುತ್ತಿದ್ದವು. ವಿಮಾನ ನಿಲ್ದಾಣ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾದ ಕಾರಣ ಆ ಟ್ರಿಪ್‌ಗಳನ್ನು ರದ್ದುಗೊಳಿಸಿ ಆದೇ ಬಸ್ಸನ್ನು ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲಕ್ಕೆ ಕಾರ್ಯಾಚರಣೆ ಗೊಳಿಸಲಾಗಿತ್ತು. ಆದರೆ ಆ ಬಸ್‌ಗಳು ದುರಸ್ತಿಗೆ ಬಂದಿರುವ ಕಾರಣ ಆ ಮಾರ್ಗದಲ್ಲಿ ಸಾರಿಗೆ ಬಸ್‌ ಸಂಚರಿಸುತ್ತಿದೆ.

ರಾಜ್ಯ ಸರಕಾರ ಶಕ್ತಿ ಯೋಜನೆ ಆರಂಭಗೊಳಿಸಿದ ಬಳಿಕ ಈ ರೂಟ್‌ಗಳಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಉದ್ದೇಶ ದಿಂದ ಸಾರಿಗೆ ಬಸ್‌ಗಳನ್ನು ಬಿಡುವಂತೆಯೂ ಆಗ್ರಹ ಕೇಳಿಬಂದಿತ್ತು. ಸದ್ಯ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದ್ದು ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next