Advertisement

ಮಣಿಪಾಲ: ಪ್ರಾಮಾಣಿಕತೆ ಮೆರೆದ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಕಂಡಕ್ಟರ್

04:01 PM Oct 09, 2019 | Sriram |

ಮಣಿಪಾಲ: ತನಗೆ ದೊರೆತ 40 ಸಾವಿರ ಬೆಲೆಯ ಬಾಳುವ ಒಡವೆಯನ್ನು ಅದರ ವಾರೀಸುದಾರರಿಗೆ ಮರಳಿಸಿ ಕೆ ಎಸ್ ಆರ್ ಟಿಸಿ ವೋಲ್ವೋ ಬಸ್ ಕಂಡಕ್ಟರ್  ಪ್ರಾಮಾಣಿಕತೆ ಮೆರೆದ ಘಟನೆ ಮಣಿಪಾಲದಲ್ಲಿ ನಡೆದಿದೆ.

Advertisement

ಮಣಿಪಾಲದ ಜಲಜಾಕ್ಷಿಯವರು ಸೋಮವಾರ ಸಂಜೆ 6 30ಕ್ಕೆ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ಸಿನಲ್ಲಿ ಮಂಗಳೂರಿಂದ ಮಣಿಪಾಲಕ್ಕೆ ಮಗಳು ಹಾಗೂ ಮೊಮ್ಮಗಳೊಂದಿಗೆ ಪ್ರಯಾಣ ಮಾಡಿದ್ದರು.

ಸಂದರ್ಭದಲ್ಲಿ ಮಗುವಿನ ಕತ್ತಿನ ಸರ ಕಳೆದು ಹೋಗಿತ್ತು. ಮರುದಿನ ಈ ವಿಚಾರ ತಿಳಿದು ಕಂಡಕ್ಟರ್ ಪ್ರಸಾದ್ ಬಳಿ ವಿಚಾರಿಸಿದಾಗ ಅವರಿಗೆ ಸಿಕ್ಕಿದ 40 ಸಾವಿರ ಬೆಲೆಯ ಚಿನ್ನದ ಸರವನ್ನು ಹಿಂತಿರುಗಿಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ ವೋಲ್ವೋ ಕಂಡಕ್ಟರ್ ಪ್ರಸಾದ್ ಅವರ ಈ ಪ್ರಾಮಾಣಿಕ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next