Advertisement

ಕೊಡಾಜೆ : ಮೈಲುಗಲ್ಲಿಗೆ ಕಾರು ಢಿಕ್ಕಿ, ಐವರಿಗೆ ಗಾಯ

07:26 PM Dec 18, 2019 | Team Udayavani |

ವಿಟ್ಲ: ರಾಷ್ಟ್ರೀಯ ಹೆದ್ದಾರಿ ಮಾಣಿ ಸಮೀಪ ಕೊಡಾಜೆಯಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಮೈಲುಗ‌ಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

Advertisement

ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ, ದಿ.ಹಸನಬ್ಬ ಅವರ ಪುತ್ರರಾದ ಝುಬೆ„ರ್‌, ಶರೀಫ್‌, ಸಿರಾಜ್‌, ವಳವೂರಿನ ಅರಬನಗುಡ್ಡೆಯ ನಿವಾಸಿ, ಹಮೀದ್‌ ಅವರ ಪುತ್ರರಾದ ಮುಸ್ತಫಾ, ಆಸಿಫ್‌ ಗಾಯಗೊಂಡವರು.

ಘಟನೆ:
ಇವರು ಎಸ್ಕೆಎಸ್ಸೆಸ್ಸೆಫ್‌ ತಲಪಾಡಿ ಘಟಕದ ಕಾರ್ಯಕರ್ತರಾಗಿದ್ದು, ಮಂಗಳವಾರ ಸಮಸ್ತ ಸಮ್ಮೇಳನಕ್ಕೆ ತಮ್ಮ ಕಾರಿನಲ್ಲಿ ಮಡಿಕೇರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ ಹಿಂದಿರುಗುವ ವೇಳೆ ಮಾಣಿ ಸಮೀಪದ ಕೊಡಾಜೆ ಮಸೀದಿ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ಇಲ್ಲಿನ ಮೈಲುಗಲ್ಲಿಗೆ ಢಿಕ್ಕಿ ಹೊಡೆದು, ಉರುಳಿದೆ. ಅಪಘಾತದ ತೀವ್ರತೆಗೆ ಸಿರಾಜ್‌ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರಾದ ಝುಬೆ„ರ್‌, ಸಿರಾಜ್‌, ಮುಸ್ತಫಾ, ಆಸಿಫ್‌ ಗಾಯಗೊಂಡಿದ್ದು, ಇವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next