Advertisement

Mangaluru: ಆಲ್ವಿನ್‌ ಡಿ’ಸೋಜ ಮೇಲೆ ಹಲ್ಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

12:50 AM Oct 10, 2024 | Team Udayavani |

ಮಂಗಳೂರು: ಪಾವೂರು ಉಳಿಯ ಬಳಿ ಮರಳು ಮಾಫಿಯಾ ಕುರಿತು ವೀಕ್ಷಣೆಗೆ ತೆರಳಿದ್ದ ಕೆಥೋಲಿಕ್‌ ಸಭಾದ ಅಧ್ಯಕ್ಷ ಆಲ್ವಿನ್‌ ಜೆರೋಮ್‌ ಡಿ’ಸೋಜಾ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಟ್ವಾಳ ತಾಲೂಕು ಫರಂಗಿಪೇಟೆ ಪುದುಗ್ರಾಮದ ಮೊಹಮ್ಮದ್‌ ಅತಾವುಲ್ಲ (40) ಹಾಗೂ ಮಾರ್ನಮಿಕಟ್ಟೆ ಶಮಾ ಅಪಾರ್ಟ್‌ಮೆಂಟ್‌ನ ತೌಸೀರ್‌ ಅಲಿಯಾಸ್‌ ಪತ್ತೂಂಜಿ ತೌಚಿ (31) ಬಂಧಿತರು.

ಇವರ ಪೈಕಿ ಅತಾವುಲ್ಲಾನು ಘಟನೆಯ ಸಮಯದಲ್ಲಿ ಆಲ್ವಿನ್‌ ಅವರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಪ್ರಚೋದನೆ ನೀಡಿದ್ದ ಹಾಗೂ ಆರೋಪಿ ತೌಸಿರ್‌ ಹಲ್ಲೆ ಮಾಡಿದ್ದ.

ಅ. 5ರಂದು ಆಲ್ವಿನ್‌ ಜೆರೋಮ್‌ ಅವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next