Advertisement

Mangaluru; ರಥಬೀದಿ ಶ್ರೀ ವೆಂಕಟರಮಣ ದೇವರಿಗೆ ಸ್ವರ್ಣ ಲಾಲ್ಕಿ ಅರ್ಪಣೆ

11:50 PM Feb 14, 2024 | Team Udayavani |

ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರಿಗೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿಯ ಸಮರ್ಪಣೆ ಬುಧವಾರ ಶ್ರೀ ಕಾಶೀ ಮಠಾಧೀಶರಾದ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ನೆರವೇರಿತು.

Advertisement

ಈ ಸ್ವರ್ಣ ಪಲ್ಲಕಿಯನ್ನು ಬ್ರಹ್ಮರಥೋತ್ಸವದ ಹಿಂದಿನ ದಿನ ನಡೆಯುವ ಶ್ರೀ ದೇವರ ಮೃಗಬೇಟೆ ಉತ್ಸವ ಸಂದರ್ಭ ಬಳಸಲಾಗುವುದು.

ದಾನಿ ಡಾ| ಪಿ. ದಯಾನಂದ ಪೈ ಕುಟುಂಬಸ್ಥರು, ಪಿ. ಸತೀಶ್‌ ಪೈ ಕುಟುಂಬಸ್ಥರು ಹಾಗೂ ಜಿಎಸ್‌ಬಿ ಸಮಾಜ ಬಾಂಧವರು ಸ್ವರ್ಣ ಲಾಲ್ಕಿಯನ್ನು ಸೇವಾರೂಪದಲ್ಲಿ ನೀಡಿದ್ದಾರೆ. ಅವರನ್ನು ಶ್ರೀಗಳು ಸಮ್ಮಾನಿಸಿದರು.

ಡಾ| ಪಿ. ದಯಾನಂದ ಪೈ ದಂಪತಿ, ಪಿ. ಸತೀಶ್‌ ಪೈ ದಂಪತಿಗಳು, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್‌ ಕಿರಣ್‌ ಪೈ, ಸತೀಶ್‌ ಪ್ರಭು, ಕೆ. ಗಣೇಶ್‌ ಕಾಮತ್‌, ಎಂ. ಜಗನ್ನಾಥ್‌ ಕಾಮತ್‌, ತಂತ್ರಿಗಳಾದ ಪಂಡಿತ್‌ ನರಸಿಂಹ ಆಚಾರ್ಯ, ಪಂಡಿತ್‌ ಕಾಶೀನಾಥ್‌ ಆಚಾರ್ಯ, ಪ್ರಧಾನ ಅರ್ಚಕರಾದ ವೇ|ಮೂ| ಹರೀಶ್‌ ಭಟ್‌, ವೇ|ಮೂ| ಚಂದ್ರಕಾಂತ್‌ ಭಟ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next