Advertisement

Mangaluru; ಸಿದ್ದಾರ್ಥ್ ಗೋಯಲ್‌ ನೂತನ ಡಿಸಿಪಿ

11:48 PM Sep 02, 2023 | Team Udayavani |

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೆಟ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್‌ ಶ್ರೀವಾಸ್ತವ್‌ ಅವರನ್ನು ವರ್ಗಾಯಿಸಲಾಗಿದ್ದು ಅವರ ಸ್ಥಾನಕ್ಕೆ 2019ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಸಿದ್ದಾರ್ಥ್ ಗೋಯಲ್‌ ಅವರನ್ನು ನಿಯುಕ್ತಿಗೊಳಿಸಲಾಗಿದೆ.

Advertisement

ಅಂಶು ಕುಮಾರ್‌ ಒಂದು ವರ್ಷದಿಂದ ಡಿಸಿಪಿಯಾಗಿದ್ದರು. 2018ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಂಶು ಕುಮಾರ್‌ ಡ್ರಗ್ಸ್‌, ಅಕ್ರಮ ಮರಳುಗಾರಿಕೆ ವಿರುದ್ಧ ವಿಶೇಷ ಕಾರ್ಯಾಚರಣೆ, ನಗರದಲ್ಲಿ ಸಿಸಿ ಕೆಮರಾ ಅಳವಡಿಕೆ ಸಹಿತ ಸಾರ್ವಜನಿಕರ ಸುರಕ್ಷೆ ಮತ್ತು ಪೊಲೀಸ್‌ ತನಿಖೆಯಲ್ಲಿ ತಂತ್ರಜ್ಞಾನಗಳ ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಭಾರೀ ಸವಾಲಾಗಿದ್ದ ನಗರದ ಜುವೆಲರಿ ಅಂಗಡಿ ಸಿಬಂದಿಯ ಹತ್ಯೆ ಪ್ರಕರಣವನ್ನು ಭೇದಿಸಿದ್ದರು. ಸದ್ಯ ಅವರಿಗೆ ಯಾವುದೇ ಸ್ಥಾನ ನಿಯೋಜನೆ ಮಾಡದೆ ವರ್ಗಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next