Advertisement

Mangaluru: ಸ್ಕೂಟರ್‌ ಕಳವು: ದೂರು ದಾಖಲು

09:58 PM Sep 15, 2023 | Team Udayavani |

ಮಂಗಳೂರು: ನಗರದ ಮೈದಾನ ಎರಡನೇ ಕ್ರಾಸ್‌ನ ಅಂಗಡಿಯೊಂದರ ಎದುರು ನಿಲ್ಲಿಸಿದ್ದ ಸ್ಕೂಟರ್‌ ಕಳವಾಗಿದೆ.

Advertisement

ಪ್ರಮೋದ್‌ ಕುಮಾರ್‌ ತನ್ನ ಕೆಂಪು ಬಣ್ಣದ ಸ್ಕೂಟರ್‌ ಅನ್ನು ಸೆ. 9ರಂದು ಸಂಜೆ ಅಂಗಡಿಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿ ಅಂಗಡಿಗೆ ಹೋಗಿ ಮರಳಿ ಬಂದು ನೋಡಿದಾಗ ಸ್ಕೂಟರ್‌ ಕಳವಾಗಿತ್ತು.

ಪಂಪ್‌ವೆಲ್‌: ಸ್ಕೂಟರ್‌ ಕಳವು
ಮಂಗಳೂರು: ನಗರದ ಪಂಪ್‌ವೆಲ್‌ ಬಳಿ ಇರುವ ಎ.ಸಿ. ಸರ್ವೀಸ್‌ ಸೆಂಟರ್‌ನ ಎದುರು ನಿಲ್ಲಿಸಿದ್ದ ಸ್ಕೂಟರ್‌ ಕಳವಾಗಿದೆ. ಸರ್ವೀಸ್‌ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡಿರುವ ಜಾನ್ಸನ್‌ ಅವರು ಸೆ. 10ರಂದು ಸಂಜೆ 6.20ಕ್ಕೆ ಸರ್ವೀಸ್‌ ಸೆಂಟರ್‌ನ ಮುಂದೆ ಸ್ಕೂಟರ್‌ ನಿಲ್ಲಿಸಿ ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ 9.30ಕ್ಕೆ ಬಂದು ನೋಡಿದಾಗ ಅಂದಾಜು 40,000 ರೂ. ಮೌಲ್ಯದ ಸ್ಕೂಟರ್‌ ಕಳವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next