Advertisement

ಮಂಗಳೂರು: ಲಾರಿಯ ಚಕ್ರಕ್ಕೆ ಸಿಲುಕಿದ ಸ್ಕೂಟರ್, ಸವಾರ ಸಾವು

12:13 PM Apr 25, 2022 | Team Udayavani |

ಮಂಗಳೂರು: ಟ್ರಕ್‌ನ ಚಕ್ರಕ್ಕೆ ಸಿಲುಕಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಜಪ್ಪಿನಮೊಗರು ಮತ್ತು ನಡುಮೊಗರು ನಡುವಿನ ರಾಷ್ಟ್ರೀಯ ಹೆದ್ದಾರಿ 66 ನಲ್ಲಿ ನಡೆದಿದೆ.

Advertisement

ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಕೊಣಾಜೆಯ ರೊನಾಲ್ಡ್(58 ) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಜಾಗರೂಕತೆಯಿಂದ ಅತೀವೇಗವಾಗಿ ಬಂದ ಟ್ರಕ್‌ ಮೊದಲು ಕಾರೊಂದಕ್ಕೆ ಢಿಕ್ಕಿಯಾಗಿ ಬಳಿಕ ಸ್ಕೂಟರ್ ಗೆ ಗುದ್ದಿದೆ ಎಂದು ತಿಳಿದು ಬಂದಿದೆ.

ಮಂಗಳೂರು ಶಾಸಕ ಯು.ಟಿ.ಖಾದರ್ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next