Advertisement

Mangaluru: ಉಳಿಯ ದ್ವೀಪ ಮರಳುಗಾರಿಕೆ ನಿಷೇಧ

02:09 AM Oct 10, 2024 | Team Udayavani |

ಮಂಗಳೂರು: ಪಾವೂರು ಉಳಿಯ ಕುದ್ರು ದ್ವೀಪದ ಸುತ್ತಮು ತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮರಳುಗಾರಿಕೆಯನ್ನು ನಿಷೇ ಧಿಸಿ ಮಂಗಳೂರು ಉಪ ವಿಭಾಗಾ ಧಿಕಾರಿ ಹರ್ಷವರ್ಧನ್‌ ಆದೇಶ ಹೊರಡಿಸಿದ್ದಾರೆ.

Advertisement

ಈ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಇತರೆ ಎಲ್ಲಾ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಣೆ, ದಕ್ಕೆಗಳಲ್ಲಿ ಅನಧಿಕೃತ ಮರಳು ಶೇಖ ರಣೆ ಮತ್ತು ಮರಳು ಹಂಚುವಂತಿಲ್ಲ. ಅಡ್ಯಾರು ಗ್ರಾಮದ ವಳಚ್ಚಿಲ್‌ ದಕ್ಕೆ, ಅಡ್ಯಾರು ಗ್ರಾಮ ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಜಿನ ಹಿಂಭಾಗದ ದಕ್ಕೆ, ನದಿಯ, ದ್ವೀಪದ ಎಡಭಾಗದಲ್ಲಿರುವ ಪಾವೂರು ದಕ್ಕೆ ಈ ನಿಷೇಧಿತ ಪ್ರದೇಶದ ವ್ಯಾಪ್ತಿಗೆ ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next