Advertisement

Mangaluru ಪ್ರೊಬೆಷನರಿ ಐಎಎಸ್‌ ಅಧಿಕಾರಿಯಾಗಿ ಪಿ. ಶ್ರವಣ್‌ ಕುಮಾರ್‌

12:57 AM Jun 02, 2024 | Team Udayavani |

ಮಂಗಳೂರು: ಪ್ರೊಬೆಷನರಿ ಐಎಎಸ್‌ ಅಧಿ ಕಾರಿ ಪಿ. ಶ್ರವಣ್‌ ಕುಮಾರ್‌ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ವರದಿ ಮಾಡಿಕೊಂಡರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರು ಪುಸ್ತಕ ನೀಡುವ ಮೂಲಕ ಶುಭ ಹಾರೈಸಿದರು.

Advertisement

ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡಿದ್ದು, ಇಂಡಿಯನ್‌ ಡಿಫೆನ್ಸ್‌ ಸ್ಟೇಟ್‌ ಸರ್ವೀಸ್‌ನಲ್ಲಿ ತರಬೇತಿ ಪಡೆದಿದ್ದಾರೆ. ಇಂಡಿಯನ್‌ ರೆವೆನ್ಯೂ ಸರ್ವಿಸ್‌ನಲ್ಲಿಯೂ ಸೇವೆ ಸಲ್ಲಿಸಿ, ಬಳಿಕ ಐ.ಎ.ಎಸ್‌. ಸೇವೆಗೆ 2023ರ ಬ್ಯಾಚ್‌ನಲ್ಲಿ ಆಯ್ಕೆಯಾಗಿದ್ದಾರೆ. ಶ್ರವಣ್‌ ಅವರು ರಾಯಚೂರು ಜಿಲ್ಲೆಯ ಕಲ್ಲೂರು ಗ್ರಾಮದವರು.

Advertisement

Udayavani is now on Telegram. Click here to join our channel and stay updated with the latest news.

Next