Advertisement

ಹತ್ತು ಹಲವು ಸವಾಲುಗಳ ಮಧ್ಯೆ ಬಿಜೆಪಿ ಸರ್ಕಾರ ನೂರು ದಿನ ಪೂರೈಸಿದೆ: ನಳಿನ್ ಕುಮಾರ್ ಕಟೀಲ್

02:54 PM Nov 08, 2019 | Naveen |

ಮಂಗಳೂರು: ನೂರು ದಿನಗಳಲ್ಲಿ ಬಿಜೆಪಿ ಸರ್ಕಾರ ನೂರಾರು ಕೆಲಸ ಮಾಡಿದೆ. ಹತ್ತು ಹಲವು ಸವಾಲುಗಳ ಮಧ್ಯೆ ಈ ಸರ್ಕಾರ ನೂರು ದಿನ ಪೂರೈಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

Advertisement

ಅವರು ಮಂಗಳೂರಿನಲ್ಲಿ ಶುಕ್ರವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಒಂದು ಕಡೆ ನೆರೆ ಮತ್ತು ಬರ ಪರಿಸ್ಥಿತಿ ಮಧ್ಯೆಯೇ ಉತ್ತಮ ಕೆಲಸ ಮಾಡಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಸರಕಾರದ 100 ದಿನಗಳ ಸಾಧನೆಯ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಮೀನುಗಾರರಿಗೆ ಈ ಬಾರಿ 2,200 ಮನೆಗಳನ್ನು ನೇರವಾಗಿ ಮೀನುಗಾರಿಕಾ ಇಲಾಖೆಯ ಮುಂಖಾಂತರ ವಿತರಿಸಲು ನಿರ್ಧಾರಿಸಲಾಗಿದೆ. ಮುಜರಾಯಿ ಇಲಾಖೆಯ 191 ಎ ದರ್ಜೆ ದೇವಸ್ಥಾನಗಳ ಪೈಕಿ 100 ದೇವಸ್ಥಾನಗಳಲ್ಲಿ ಈ ಬಾರಿ 1000 ಸಾಮೂಹಿಕ ವಿವಾಹ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಪ್ರಭಾರಿ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ಮಾಜಿ ಶಾಸಕ ಎನ್. ಯೋಗೀಶ್ ಭಟ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next