Advertisement

Mangaluru ಉದ್ಯೋಗ ಆಮಿಷ: 2.50 ಲ.ರೂ. ವಂಚನೆ

11:47 PM Oct 10, 2023 | Team Udayavani |

ಮಂಗಳೂರು: ಕತಾರ್‌ನಲ್ಲಿ ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ವ್ಯಕ್ತಿಯೋರ್ವರಿಗೆ ಆರೋಪಿಗಳು ಇ-ಮೇಲ್‌ ಮೂಲಕ ಕತಾರ್‌ನಲ್ಲಿ ಉದ್ಯೋಗಕ್ಕೆ ಇಂಟರ್‌ವ್ಯೂ ನಡೆಯುತ್ತಿರುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ದೂರುದಾರ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು.

ಒಂದು ದಿನ ಅವರಿಗೆ ಕರೆ ಮಾಡಿದ ಆರೋಪಿಗಳಾದ ರೋಹನ್‌ ಶರ್ಮ ಮತ್ತು ಆಲಿ ಎಂಬವರು ಅಂಕಪಟ್ಟಿ, ರೆಸ್ಯೂಮ್‌, ಸ್ಯಾಲರಿ ಸ್ಲಿಪ್‌, ಪಾಸ್‌ಪೋರ್ಟ್‌, ಕೋವಿಡ್‌ ವ್ಯಾಕ್ಸಿನೇಶನ್‌ ಸರ್ಟಿಫಿಕೆಟ್‌, ಹಣ ಕಳುಹಿಸುವಂತೆ ತಿಳಿಸಿದ್ದರು. ಬಳಿಕ ದೂರುದಾರರಿಂದ ಹಂತ ಹಂತವಾಗಿ ಒಟ್ಟು 2,50,325 ರೂ.ಗಳನ್ನು ವರ್ಗಾಯಿಸಿಕೊಂಡು ಯಾವುದೇ ಉದ್ಯೋಗ ನೀಡದೆ, ಹಣವನ್ನೂ ವಾಪಸ್‌ ಕೊಡದೆ ವಂಚಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next