Advertisement

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

02:01 AM Sep 18, 2024 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಸಂಚಾರಕ್ಕೆ ಅಪಾಯಕಾರಿಯಾಗಿರುವ ಸೇತುವೆಗಳ ಪರಿಶೀಲನೆಗೆ ಬೆಂಗಳೂರಿನಿಂದ ಆಗಮಿಸಿರುವ ತಾಂತ್ರಿಕ ತಜ್ಞರ ಸಮಿತಿ ಮಂಗಳವಾರ ಮರವೂರು ಸೇತುವೆಯನ್ನು ಪರಿಶೀಲನೆ ನಡೆಸಿದೆ.

Advertisement

ಮರವೂರಿನ ಹಳೆ ಸೇತುವೆಯ ಪಿಲ್ಲರ್‌ಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಜೂ.14ರಿಂದ ಸೇತುವೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪೊಳಲಿ, ಉಳಾಯಿಬೆಟ್ಟು, ಬಳ್ಕುಂಜೆ ಸೇತುವೆಯನ್ನು ಪರಿಶೀಲಿಸಿದ ತಾಂತ್ರಿಕ ತಜ್ಞರು ಮರವೂರು ಸೇತುವೆಯನ್ನೂ ಪರಿಶೀಲಿಸಿದ್ದಾರೆ.

ಬೃಹತ್‌ ಕ್ರೇನ್‌ ಮೂಲಕ ಸೇತುವೆ ಯ ಅಡಿಭಾಗಕ್ಕೆ ತೆರಳಿದ ತಜ್ಞರು ಸೇತುವೆ ಯನ್ನು ಪರಿಶೀಲಿಸಿ, ಸೇತುವೆಯ ಪಿಲ್ಲರ್‌, ಗರ್ಡರ್‌ನ ಕಾಂಕ್ರೀಟ್‌ ಭಾಗಗಳನ್ನು ಸಂಗ್ರಹಿಸಿದ್ದಾರೆ. ಇದರ ಮೂಲಕ ಸೇತುವೆಯ ದೃಢತೆಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಿದ್ದಾರೆ. ಜಿಲ್ಲಾಧಿಕಾರಿಯವರು ವರದಿಯನ್ನು ಪರಿಶೀಲಿಸಿದ ಬಳಿಕ ಸೇತುವೆ ಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ಅಥವಾ ಕಾಮಗಾರಿ ಕೈಗೊಳ್ಳುವ ಬಗ್ಗೆ ನಿರ್ಧಾರವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next