Advertisement

Mangaluru ವಯೋವೃದ್ಧ ಸಹೋದರಿಯರು ಆತ್ಮಹತ್ಯೆ

11:36 PM Oct 03, 2023 | Team Udayavani |

ಮಂಗಳೂರು: ವಯೋವೃದ್ಧೆಯರಾದ ಅಕ್ಕ ಮತ್ತು ತಂಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ಸಂಭವಿಸಿದೆ.

Advertisement

ಜಗನ್ನಾಥ್‌ ಭಂಡಾರಿ ಅವರ ಪತ್ನಿ ಲತಾ ಭಂಡಾರಿ (70) ಮತ್ತು ಆಕೆಯ ಅಕ್ಕ ಸುಂದರಿ ಶೆಟ್ಟಿ (80) ಮೃತಪಟ್ಟವರು. ಮನೆಯಲ್ಲಿ ಜಗನ್ನಾಥ್‌ ಭಂಡಾರಿ, ಲತಾ ಭಂಡಾರಿ ಮತ್ತು ಸುಂದರಿ ಶೆಟ್ಟಿ ವಾಸವಾಗಿದ್ದರು. 78 ವರ್ಷ ವಯಸ್ಸಿನ ಜಗನ್ನಾಥ್‌ ಭಂಡಾರಿ ಅವರು ಎಂದಿನಂತೆ ಬಾರ್‌ವೊಂದಕ್ಕೆ ಕೆಲಸಕ್ಕೆಂದು ಹೋಗಿದ್ದರು.

ಸಂಜೆ 4.30ಕ್ಕೆ ವಾಪಸ್‌ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿತ್ತು. ಕಿಟಕಿಯಿಂದ ನೋಡಿದಾಗ ಇಬ್ಬರು ಕೂಡ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿದ್ದರು. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next