Advertisement

Mangaluru: ಚೆಕ್‌ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ

08:38 PM Oct 28, 2024 | Team Udayavani |

ಮಂಗಳೂರು: ಚೆಕ್‌ ಅಮಾನ್ಯ ಪ್ರಕರಣದಲ್ಲಿ ಮಂಗಳೂರಿನ 9ನೇ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಯನ್ನು ದೋಷಮುಕ್ತಗೊಳಿಸಿದೆ.

Advertisement

ಬೆಳ್ತಂಗಡಿ ಗ್ರಾಮದ ಆರೋಪಿ ಶರತ್‌ ಜೈನ್‌ ವಿರುದ್ಧ ಮಂಗಳೂರಿನ ಜಯಾಂಬಿಕ ಚಿಟ್ಸ್‌ ಪ್ರೈ.ಲಿ. ಕಂಪೆನಿಯು 3 ಲ.ರೂ. ಚೆಕ್‌ ಅಮಾನ್ಯ ಪ್ರಕರಣ ದಾಖಲಿಸಿತ್ತು. ನ್ಯಾಯಾಲಯವು ದೂರುದಾರ ಸಂಸ್ಥೆ ಹಾಜರುಪಡಿಸಿದ ದಾಖಲೆ ಮತ್ತು ಮೌಖೀಕ ಸಾಕ್ಷಿಯನ್ನು ಪರಿಗಣಿಸಿ ದೂರುದಾರರು ಮತ್ತು ಆರೋಪಿ ಪರ ವಕೀಲರ ವಾದ ವಿವಾದವನ್ನು ಆಲಿಸಿದ ಬಳಿಕ ಆರೋಪಿ ತಪ್ಪಿತಸ್ಥನಲ್ಲ ಎಂದು ತೀರ್ಮಾನಿಸಿತು.

ಆರೋಪಿ ಪರವಾಗಿ ವಕೀಲರಾದ ಸುಕೇಶ್‌ ಕುಮಾರ್‌ ಶೆಟ್ಟಿ ಮತ್ತು ಕೆ.ಶ್ರೀಪತಿ ಪ್ರಭು ಅವರು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next