Advertisement

Mangaluru CCB ಕಾರ್ಯಾಚರಣೆ: ಜೂಜಾಟದಲ್ಲಿ ನಿರತರಾಗಿದ್ದ 11 ಮಂದಿ ಬಂಧನ

11:15 PM Jun 17, 2023 | Team Udayavani |

ಮಂಗಳೂರು: ನಗರದ ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿ ಮೀನಕಳಿಯದ ರೈಲ್ವೆ ಟ್ರಾಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಜೂಜಾಟವಾದ ಅಂದರ್ – ಬಾಹರ್ ಆಟವಾಡುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಶನಿವಾರ(ಜೂನ್ 17) ಬಂಧಿಸಿದ್ದಾರೆ.

Advertisement

ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಮೊಹಮ್ಮದ್ ಹನೀಫ್(36),ಅನಿಲ್ ಕುಮಾರ್(40), ರಾಮಣ್ಣ ಕವಡಿಮಟ್ಟಿ(31),ರಾಮಪ್ಪ ಲಮಾಣಿ(38), ಮನೋಹರ್(53), ನಾಗರಾಜ(42),ಸತೀಶ್ (36), ಹಸೇನಾರ್(55), ಟಿ.ಎಂ.ಮರಿಯಪ್ಪ(41), ಮುರ್ತುಜಾ ಚಕಣಿ(38), ಮತ್ತು ಶಶಿ ದೇವಾಡಿಗ(52) ಅವರನ್ನು ಬಂಧಿಸಿದ್ದಾರೆ.

ಆಟಕ್ಕೆ ಉಪಯೋಗಿಸಿದ 14,420 ರೂ. ನಗದು, ಇಸ್ಪೀಟ್ ಕಾರ್ಡ್ ಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ರಾಜೇಂದ್ರ ಬಿ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ ಹಾಗೂ ಸಿಸಿಬಿ ಸಿಬಂದಿಯವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next