Advertisement

Ullal; ನಿರ್ಮಲ ಭಾರತ ಚಾರಿಟೆಬಲ್‌ ಟ್ರಸ್ಟ್‌ ಮಹಿಳಾ ಕಾರ್ಯದರ್ಶಿ ಮೇಲೆ ಹಲ್ಲೆ

01:26 AM Mar 13, 2024 | Team Udayavani |

ಉಳ್ಳಾಲ: ಮಂಗಳೂರು ವಿ.ವಿ. ಕ್ಯಾಂಪಸ್‌ನೊಳಗೆ ದಕ್ಷಿಣ ಕನ್ನಡದ ನಿರ್ಮಲ ಭಾರತ ಚಾರಿಟೆಬಲ್‌ ಟ್ರಸ್ಟ್‌ಗೆ ಸೇರಿ 2 ಎಕರೆ ಜಾಗಕ್ಕೆ ಬೇಲಿ ಹಾಕುವ ಸಂದರ್ಭ ಟ್ರಸ್ಟ್‌ನ ಮಹಿಳಾ ಕಾರ್ಯದರ್ಶಿಗೆ ತಡೆಯೊಡ್ಡಿ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವ ಉಳ್ಳಾಲ ಠಾಣಾಧಿಕಾರಿ ಎಚ್‌.ಎನ್‌. ಬಾಲಕೃಷ್ಣ ವಿರುದ್ಧ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಬಳಿಕ ತರಾತುರಿಯಲ್ಲಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಎಫ್‌ಐಆರ್‌ ಪ್ರತಿಯನ್ನು ಮಂಗಳೂರು ನಗರ ಕಮಿಷನರ್‌ ಮಂಗಳವಾರ ಸ್ವತಃ ಬೆಂಗಳೂರಿಗೆ ತೆರಳಿ ಹೈಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಕಾರ್ಯದರ್ಶಿ ಲತಾ ರೈ ದೂರು ದಾಖಲಿಸಿದ್ದು, ಜ. 26ರಂದು ನಡೆದ ಘಟನೆಯ ಕುರಿತು ಪೊಲೀಸ್‌ ಕಮಿಷನರ್‌ಗೆ ದೂರು ಸಲ್ಲಿಸಿದ್ದು, ಕಮಿಷನರ್‌ ಸತ್ಯಾಸತ್ಯತೆ ಮತ್ತು ಇಲಾಖಾ ತನಿಖೆಗಾಗಿ ದಕ್ಷಿಣ ವಲಯ ಸಹಾಯಕ ಪೊಲೀಸ್‌ ಕಮಿಷನರ್‌ ಧನ್ಯಾ ನಾಯಕ್‌ ಅವರಿಗೆ ಸೂಚಿಸಿದ್ದು, ಘಟನೆ ನಡೆದು ತಿಂಗಳು ಕಳೆದರೂ ಪೊಲೀಸ್‌ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ದೂರುದಾರ ಟ್ರಸ್ಟ್‌ನ ಪದಾಧಿಕಾರಿಗಳು ಹೈಕೋರ್ಟ್‌ ಗೆ ಮನವಿ ಸಲ್ಲಿಸಿದ್ದು, ಹೈಕೋರ್ಟ್‌ ಆದೇಶ ನೀಡಿದ ತತ್‌ಕ್ಷಣ ಎಚ್ಚೆತ್ತ ಪೊಲೀಸ್‌ ಅಧಿಕಾರಿಗಳು ಸೋಮವಾರ ತಡರಾತ್ರಿ ಐಪಿಸಿ 1680 (ಯು/ಎಸ್‌ – 354, 506, 323)ರಡಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next