Advertisement

Mangaluru ಕಾರು ಢಿಕ್ಕಿ; ದ್ವಿಕ್ರವಾಹನಗಳು ಜಖಂ; ಒಬ್ಬರಿಗೆ ಗಾಯ

10:03 PM Feb 17, 2024 | Team Udayavani |

ಮಂಗಳೂರು: ನಗರದ ಕೊಡಿಯಾಲಬೈಲಿನ ನವಭಾರತ ವೃತ್ತದ ಬಳಿಯ ಹೊಟೇಲ್‌ಲೊಂದರ ಎದುರು ಶನಿವಾರ ಮಧ್ಯಾಹ್ನ ಅತೀ ವೇಗದಿಂದ ಬಂದ ಕಾರೊಂದು ಇನ್ನೊಂದು ಕಾರಿಗೆ ಢಿಕ್ಕಿಯಾಗಿ ಮುಂದಕ್ಕೆ ಸಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊಬ್ಬರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮಹಿಳೆಯೊಬ್ಬರು ಕೆ.ಎಸ್‌.ರಾವ್‌ ರಸ್ತೆ ಕಡೆಯಿಂದ ಕಾರು ಚಲಾಯಿಸಿಕೊಂಡು ಬಂದಿದ್ದರು. ಘಟನೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳು, ರಸ್ತೆಯಲ್ಲಿ ಸಾಗುತ್ತಿದ್ದ ಇನ್ನೊಂದು ಕಾರು, ಜಖಂಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next