Advertisement

ಮಂಗಳೂರು: ಬಸ್‌ನ ಸೀಟಿನಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

10:47 PM Apr 10, 2023 | Team Udayavani |

ಮಂಗಳೂರು: ಬಸ್‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಲೇಡಿಹಿಲ್‌ ಸಾಯಿಬಾಬಾ ಮಂದಿರದ ಬಳಿ ಸಂಭವಿಸಿದೆ.

Advertisement

ಪಾರ್ವತವ್ವ(53) ಗಾಯಗೊಂಡವರು. ಅವರು ಎ.5ರಂದು ಪತಿ ಆನಂದಪ್ಪ ಮತ್ತು ಮೊಮ್ಮಗ ಶಿವರಾಜ್‌ನೊಂದಿಗೆ ಮಂಗಳೂರಿನ ಆಸ್ಪತ್ರೆಗೆಂದು ಬಂದು ವಾಪಸ್‌ ಉಡುಪಿ ಕಡೆಗೆ ಹೋಗುತ್ತಿದ್ದರು. ಬಸ್‌ ಲೇಡಿಹಿಲ್‌ ಸಾಯಿಬಾಬಾ ಮಂದಿರದ ಬಳಿ ತಲುಪಿದಾಗ ಬಸ್‌ ಚಾಲಕ ಹಂಪ್ಸ್‌ ಗಮನಿಸದೆ ಏಕಾಏಕಿ ಬ್ರೇಕ್‌ ಹಾಕಿದ ಪರಿಣಾಮ ಬಸ್‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪಾರ್ವತವ್ವ ಅವರು ಬಸ್ಸಿನೊಳಗೆ ಬಿದ್ದು ಅವರ ಸೊಂಟ ಮತ್ತು ಬೆನ್ನು ಮೂಳೆ ಮುರಿತದ ಗಾಯವಾಗಿದೆ.

ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next