Advertisement

Mangaluru ಬೋಟ್‌ನ ಚಾಲಕ ನಾಪತ್ತೆ; ಪ್ರಕರಣ ದಾಖಲು

10:58 PM Apr 22, 2024 | Team Udayavani |

ಮಂಗಳೂರು: ಮೀನುಗಾರಿಕೆ ವೇಳೆ ಯುವಕನೋರ್ವ ನಾಪತ್ತೆಯಾಗಿದ್ದಾರೆ. ಮುನೀಶ್‌ ಕುಮಾರ್‌ (32) ನಾಪತ್ತೆಯಾದವರು. ಇವರು ದಕ್ಷಿಣ ದಕ್ಕೆಯಲ್ಲಿ ಇರ್ಫಾನ್‌ ಅವರ ಮಾಲಕತ್ವದ ಕುವತ್‌ ಹೆಸರಿನ ಬೋಟ್‌ನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು.

Advertisement

ಎ. 15ರಂದು ರಾತ್ರಿ 10 ಗಂಟೆಗೆ ಇತರ 10 ಮಂದಿ ಮೀನುಗಾರರೊಂದಿಗೆ ಮೀನುಗಾರಿಕೆ ತೆರಳಿದ್ದರು. ಎ. 17ರಂದು ಮೀನು ಹಿಡಿಯುವ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದರು. ಉಳಿದ ಮೀನುಗಾರರು ಹುಡುಕಾಟ ನಡೆಸಿದರೂ ಮುನೀಶ್‌ ಕುಮಾರ್‌ ಪತ್ತೆಯಾಗಿಲ್ಲ.

 

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next