Advertisement

ಬೆಂಗಳೂರು-ಮಂಗಳೂರು ವಿಶೇಷ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ!

02:08 PM Apr 09, 2021 | Team Udayavani |

ಮಂಗಳೂರು: ವಾರದಲ್ಲಿ ನಾಲ್ಕು ದಿನ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲಿನ ವೇಳಾ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಈ ರೈಲು ಏಪ್ರಿಲ್ 11 ರಿಂದ ಪ್ರತಿ ದಿನ ಸಂಚರಿಸಲಿದೆ.

Advertisement

ಇಂದು ( ಏಪ್ರಿಲ್ 9) ಈ ಬಗ್ಗೆ ಪ್ರಕಟನೆ ಹೊರಡಿಸಿರುವ ರೈಲು ಅಧಿಕಾರಿಗಳು ವಾರದ ನಾಲ್ಕು ದಿನ ವಾಯಾ ಕುಣಿಗಲ್ ಮೇಲೆ ಸಂಚರಿಸುತ್ತಿದ್ದ ಬೆಂಗಳೂರು- ಮಂಗಳೂರು ವಿಶೇಷ ರೈಲು ಇನ್ಮುಂದೆ ಪ್ರತಿ ದಿನ ಓಡಾಡಲಿದೆ ಎಂದಿದ್ದಾರೆ.

ವಿಶೇಷ ಎಕ್ಸಪ್ರೆಸ್ ಟ್ರೈನ್ ನಂಬರ್ 06515/06516 ಪ್ರತಿ ದಿನ ರಾತ್ರಿ 9.30ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು, ಮಂಗಳೂರಿಗೆ 7.55ಕ್ಕೆ ತಲುಪಲಿದೆ. ಇದೇ ಟ್ರೈನ್ ಮಂಗಳೂರಿನಿಂದ ರಾತ್ರಿ 8.10 ಕ್ಕೆ ಹೊರಟು ಮಾರನೇ ದಿನ ಮುಂಜಾನೆ 6.50ಕ್ಕೆ ಬೆಂಗಳೂರಿಗೆ ಬಂದು ತಲುಪಲಿದೆ.

ಇನ್ನು ಇಂದಿನಿಂದ(ಏಪ್ರಿಲ್9) ಯಶವಂತಪುರ-ಕಾರವಾರ (06513/14) ರೈಲಿನ ವೇಳಾಪಟ್ಟಿಯಲ್ಲಿಯೂ ಬದಲಾವಣೆಯಾಗಿದೆ. ಈ ರೈಲು ಪ್ರತಿದಿನ ರಾತ್ರಿ 11.45ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 3.40 PMಗೆ ಬಂದು ಸೇರಲಿದೆ. ಇದೆ ಟ್ರೈನ್ ಕಾರವಾರ ರೈಲು ನಿಲ್ದಾಣದಿಂದ ಸಂಜೆ 4.40 PM ಮರು ಪ್ರಯಾಣ ಬೆಳೆಸಲಿದ್ದು, ಯಶವಂತಪುರ ರೈಲು ನಿಲ್ದಾಣಕ್ಕೆ  ಮರುದಿನ 11.45 AMಗೆ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next