Advertisement

Mangaluru: ಮಾದಕ ವಸ್ತು ಸೇವನೆ ಆರೋಪ; ವ್ಯಕ್ತಿ ಸೆರೆ

06:58 PM Oct 24, 2023 | Team Udayavani |

ಮಂಗಳೂರು: ಯೆಯ್ಯಾಡಿಯಲ್ಲಿ ಮಾದಕವಸ್ತು ಸೇವಿಸಿ ರಸ್ತೆಯಲ್ಲಿ ತೂರಾಡುತ್ತಿದ್ದ ಕಾವೂರು ನಂದನಪುರ ನಿವಾಸಿ ಪ್ರಶಾಂತ ಕುಮಾರ (41) ನನ್ನು ಶನಿವಾರ ತಡರಾತ್ರಿ ಕದ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಉಪ ನಿರೀಕ್ಷಕ ಉಮೇಶ್‌ ಕುಮಾರ್‌ ಎಂ. ಅವರು ಸಿಬಂದಿಯೊಂದಿಗೆ ರೌಂಡ್ಸ್‌ನಲ್ಲಿದ್ದಾಗ, ಯೆಯ್ಯಾಡಿಯಲ್ಲಿ ರಸ್ತೆಯಲ್ಲಿ ತೂರಾಡುತ್ತಿದ್ದ ಆತನನ್ನು ವಿಚಾರಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next