Advertisement

Mangaluru: ಮೀನುಗಾರಿಕೆಗೆ ತೆರಳಿದ್ದ ಬೋಟ್ ಬೆಂಕಿಗಾಹುತಿ

11:20 PM Aug 05, 2024 | Team Udayavani |

ಮಂಗಳೂರು: ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ಬೆಂಕಿಗಾಹುತಿಯಾದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.

Advertisement

ಹುಸೈನ್‌ ಮಾಲಕತ್ವದ ಸಫ‌ವಿ ಹೆಸರಿನ ಬೋಟ್‌ ಮಂಗಳೂರು ದಕ್ಕೆಯಿಂದ ರವಿವಾರ ಮೀನುಗಾರಿಕೆಗೆ ತೆರಳಿತ್ತು. ಬೋಟ್‌ನಲ್ಲಿ 10 ಮಂದಿ ಮೀನುಗಾರರಿದ್ದರು.

ಸೋಮವಾರ ಮುಂಜಾನೆ 3ರಿಂದ 4 ಗಂಟೆಯ ಅವಧಿಯಲ್ಲಿ ದಕ್ಕೆಯಿಂದ ಸುಮಾರು 88 ನಾಟಿಕಲ್‌ ಮೈಲು ದೂರದಲ್ಲಿ ಬೋಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಇದರಲ್ಲಿದ್ದ ಮೀನುಗಾರರನ್ನು ಮತ್ತೊಂದು ಬೋಟ್‌ನಲ್ಲಿದ್ದವರು ರಕ್ಷಿಸಿದ್ದಾರೆ.

ಬೋಟ್‌ ಅವಘಡದಿಂದ ಸುಮಾರು 1 ಕೋ.ರೂ. ನಷ್ಟವುಂಟಾಗಿದೆ ಎಂದು ಬೋಟ್‌ ಮಾಲಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next