Advertisement

ಪಾರ್ಲಿಮೆಂಟ್‌ ಸಭಾಂಗಣದಲ್ಲಿ ಮಂಗಳೂರಿನ ಪ್ರಥಮ್‌ ಭಾಷಣ

11:51 PM Nov 03, 2022 | Team Udayavani |

ಮಂಗಳೂರು: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಹೊಸದಿಲ್ಲಿಯ ಪಾರ್ಲಿಮೆಂಟ್‌ ಸಭಾಂಗಣದಲ್ಲಿ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಬಗ್ಗೆ ಮಂಗಳೂರಿನ ಅಮೃತ ವಿದ್ಯಾಲಯದ ವಿದ್ಯಾರ್ಥಿ ಪ್ರಥಮ್‌ ಕಿಣಿ ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ.

Advertisement

ಅಮೃತ ವಿದ್ಯಾಲಯದ ಪ್ರಾಂಶು ಪಾಲೆ ಡಾ| ಆರತಿ ಎಚ್‌. ಶೆಟ್ಟಿ ಮಾತನಾಡಿ, ಈ ಅವಕಾಶ ಪಡೆದ ಅತ್ಯಂತ ಕಿರಿಯವ ಪ್ರಥಮ್‌ ಆಗಿ ದ್ದಾರೆ. 6ನೇ ತರಗತಿಯ ಪ್ರಥಮ್‌ ರಾಷ್ಟ್ರದಿಂದ ಆಯ್ಕೆಯಾದ 75 ವಿದ್ಯಾರ್ಥಿಗಳಲ್ಲಿ ಓರ್ವ ಎಂದರು.

ಯತೀಶ್‌ ಬೈಕಂಪಾಡಿ ಮಾತನಾಡಿ, ಕಳೆದ ವರ್ಷ ಕೇಂದ್ರದ ರಕ್ಷಣ ಮತ್ತು ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ವೀರ್‌ಗಾಥಾ ಸ್ಪರ್ಧೆಯಲ್ಲಿ ಪ್ರಥಮ್‌ ಸೂಪರ್‌ 25ರಲ್ಲಿ ಆಯ್ಕೆಯಾಗಿ ಪ್ರಬಂಧ ಮಂಡಿಸಿದ್ದರು. ಆ ಸ್ಪರ್ಧೆಯ ಮುಂದುವರಿದ ಭಾಗವಾಗಿ ಈ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು ಎಂದರು.

ಪ್ರಥಮ್‌ ಪೋಷಕರಾದ ಸುನಿಲ್‌ ಕಿಣಿ, ಅಕ್ಷತಾ ಕಿಣಿ ಪತ್ರಿಕಾಗೋಷ್ಠಿ ಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next