Advertisement

Missing Case ಮಂಗಳೂರು: ಯುವಕ ನಾಪತ್ತೆ; ದೂರು ದಾಖಲು

10:34 PM Dec 09, 2023 | Team Udayavani |

ಮಂಗಳೂರು: ಕಟೀಲಿಗೆ ಹೋಗುವುದಾಗಿ ಹೇಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿದ್ದಾರೆ. ಮೀನು ಮಾರಾಟ ಮಾಡಿಕೊಂಡಿದ್ದ ತಿಲಕರಾಜ್‌ ಎಂ. (29)ನಾಪತ್ತೆಯಾದವರು.

Advertisement

ಡಿ. 6ರಂದು ಬೆಳಗ್ಗೆ 11ಕ್ಕೆ ಮದುವೆಗೆ ಹೋಗುವುದಾಗಿ ಹೇಳಿ ಸೂಟರ್‌ಪೇಟೆಯಲ್ಲಿರುವ ಅತ್ತೆ ಮನೆಗೆ ಹೋಗಿ ಅನಂತರ ಓರ್ವರ ಸ್ಕೂಟರ್‌ನಲ್ಲಿ ಡ್ರಾಪ್‌ ಪಡೆದು ಕಟೀಲಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಅವರು ನಾಪತ್ತೆಯಾಗಿದ್ದಾರೆ.

ಗೋಧಿ ಮೈಬಣ್ಣ, ದಪ್ಪ ಶರೀರ, ದುಂಡು ಮುಖ, 5.2 ಅಡಿ ಎತ್ತರ ಹೊಂದಿದ್ದರು. ನೀಲಿ ಮತ್ತು ಹಳದಿ ಬಣ್ಣದ ಅಂಗಿ, ಕೇಸರಿ ಬಣ್ಣದ ಲುಂಗಿ ಧರಿಸಿದ್ದರು. ಕನ್ನಡ, ತುಳು, ಹಿಂದಿ, ಮಲಯಾಳ ಮಾತನಾಡುತ್ತಾರೆ.

ಮಾಹಿತಿ ದೊರೆತವರು ಕಂಕನಾಡಿ ನಗರ ಠಾಣೆ (0824-2220529) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next