Advertisement
ಮಂಗಳೂರು ವಿ.ವಿ. ಕ್ಯಾಂಪಸ್ನಲ್ಲಿ ರವಿವಾರ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಇದೊಂದು ಮಹತ್ವಪೂರ್ಣ ಶಿಲಾನ್ಯಾಸ. ನಾರಾಯಣಗುರುಗಳ ಚಿಂತನೆ, ಭಾವೀ ಭಾರತದ ಕಲ್ಪನೆಯನ್ನು ಯುವ ಜನಾಂಗಕ್ಕೆ ಅದರಲ್ಲೂ ಕರ್ನಾಟಕದ ಜನರಿಗೆ ಮಾರ್ಗದರ್ಶನ ನೀಡುವಂತಹ ಈ ಅಧ್ಯಯನ ಪೀಠದ ಕಾರ್ಯಚಟುವಟಿಕೆಗಳಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು. ನಾರಾಯಣ ಗುರುಗಳು ತಮ್ಮ ಜೀವಿತಾವಧಿಯಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದರು, ವೈದಿಕ ಪರಂಪರೆಯನ್ನಲ್ಲ. ಇಂದಿಗೂ ಅವರ ಚಿಂತನೆಯಂತೆ ಶಿವಗಿರಿಯಲ್ಲಿ ಜನರ ಮನಪರಿವರ್ತನೆಯ, ಜ್ಞಾನ ಹಂಚುವ ಕಾರ್ಯ ನಡೆಯುತ್ತಿದೆ ಎಂದರು.
ಮಂಗಳೂರು ವಿವಿ ಕುಲಸಚಿವ ಪ್ರೊ| ಎ.ಎಂ. ಖಾನ್ ಸ್ವಾಗತಿಸಿದರು. ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜಕ ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದರು.
Related Articles
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜದ ಅಸಮಾನತೆಯನ್ನು ದೂರ ಮಾಡಲು ಕ್ರಾಂತಿಕಾರಿಯಾಗಿ ಹೋರಾಡಿದವರು ನಾರಾಯಣ ಗುರುಗಳು. ಅಂತಹ ಮಹಾತ್ಮರ ಹೆಸರಿನಲ್ಲಿ ಸ್ಥಾಪನೆಗೊಳ್ಳಲಿರುವ ಅಧ್ಯಯನ ಪೀಠದ ಮೂಲಕ ಅವರ ಆಶಯಗಳು ಈಡೇರಲಿ. ಅಧ್ಯಯನ ಪೀಠದ ಕಟ್ಟಡಕ್ಕೆ ಸರಕಾರದ ವತಿಯಿಂದ ಒಂದು ಕೋಟಿ ರೂ. ಅನುದಾನವನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
Advertisement