Advertisement

ಪಾಕ್ ಪರ ಘೋಷಣೆ ವಿರೋಧಿಸಿ ವಿಹಿಂಪ, ಬಜರಂಗದಳ ಪ್ರತಿಭಟನೆ

09:55 AM Feb 22, 2020 | Naveen |

ಮಂಗಳೂರು: ಸಿಎಎ ವಿರೋಧಿ ಸಮಾವೇಶದಲ್ಲಿ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಶುಕ್ರವಾರದಂದು ನಗರದ ಕದ್ರಿ ಮಲ್ಲಿಕಟ್ಟೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

Advertisement

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಎಂ ಬಿ ಪುರಾಣಿಕ್ ಅವರು ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಹಿಂದಿರುವ ದುಷ್ಟ ಶಕ್ತಿ ಯ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮಾತನಾಡಿ ಅಮೂಲ್ಯ ಪಾಕ್ ಪರ ಘೋಷಣೆ ಬಗ್ಗೆ ಎನ್ ಐ ಎ ತನಿಖೆಯಾಗಬೇಕು. ಆಕೆಯ ಹೇಳಿಕೆಯ ಹಿಂದೆ ಪಾಕಿಸ್ಥಾನದ ಭಯೋತ್ಪಾದಕರ ಕೈವಾಡದ ಸಾಧ್ಯತೆ ಇದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ಗೋಪಾಲ್ ಕುತ್ತಾರ್ ಶಿವಾನಂದ ಮೆಂಡನ್ , ರವಿ ಅಸೈಗೋಳಿ ಪುನೀತ್ ಅತ್ತಾವರ .ಮುರುಳೀಧರ್ ರಾವ್. ಸುರೇಖಾ ರಾಜ್, ಅಶಾ ಜಗದೀಶ್ , ಸಂತೋಷ್ ಕದ್ರಿ, ಗುರು ಪ್ರಸಾದ್ ಉಳ್ಳಾಲ, ಚರಣ್ ರಾಜ್ ಕುಲಶೇಖರ, ವಿಶಾಲಾಕ್ಷಿ ಸುರತ್ಕಲ್, ಗೋಷಿತಾ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next