Advertisement

ಫಾಸ್ಟ್ ಟ್ಯಾಗ್ ಹಿಂದೆ ದೊಡ್ಡ ಲಾಭಿ ಇದೆ :ಯು.ಟಿ ಖಾದರ್

05:56 PM Dec 04, 2019 | Naveen |

ಮಂಗಳೂರು: ಫಾಸ್ಟ್ ಟ್ಯಾಗ್ ಯೋಜನೆ ಅನುಷ್ಠಾನದ ಹಿಂದೆ ದೊಡ್ಡ ಲಾಭಿ ಇದೆ ಇದನ್ನು ಇಷ್ಟು ವೇಗವಾಗಿ ತರುವ ಅವಶ್ಯಕತೆ ಏನಿತ್ತು? ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

Advertisement

ಟೋಲ್ ಗೇಟ್ ನಲ್ಲಿ ಫಾಸ್ಟ್ ಟ್ಯಾಗ್ ಯೋಜನೆ ಅನುಷ್ಠಾನ ವಿಚಾರವಾಗಿ ಅವರು ಬುಧವಾರದಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಯಾವಗಾದರೂ ಒಮ್ಮೆ ಹೋಗುವಾಗ ಯಾಕೆ ಫಾಸ್ಟ್ ಟ್ಯಾಗ್ ಗೆ ಹಣ ನೀಡಬೇಕು. ರಸ್ತೆ ಚೆನ್ನಾಗಿ ಇದ್ರೆ ಹಣ ನೀಡಬಹುದು ಆದರೆ ಹಾಳಾದ ರಸ್ತೆಗೆ ಯಾಕೆ ಹಣ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಬೆದರಿಕೆ ಬಂದಿದೆ, ಗನ್ ಮ್ಯಾನ್ ರಕ್ಷಣೆ ಇಟ್ಟುಕೊಳ್ಳಿ ಎಂದು ಗೃಹಸಚಿವರು ಹೇಳಿದ್ದಾರೆ. ನನಗೆ ನೇರವಾಗಿ ಬೆದರಿಕೆ ಬಂದಿಲ್ಲ. ಗುಪ್ತಚರ ಇಲಾಖೆಯ ಮೂಲಕ ಸರ್ಕಾರಕ್ಕೆ ಮಾಹಿತಿ ಸಿಕ್ಕಿದೆ. ನಾನು ಈಗ ಗನ್ ಮ್ಯಾನ್ ಬೇಡ ಅಂತಾ ಹೇಳಿದ್ದೇನೆ. ನನಗೆ ನನ್ನ ಜೀವ ಮುಖ್ಯವಲ್ಲ, ಜನರ ಜೀವವೂ ಮುಖ್ಯ. ತನ್ವೀರ್ ಸೇಠ್ ಮೇಲೆ ಹಲ್ಲೆಯಾಗುತ್ತದೆ ಅದು ಹೇಗೆ ನಡೆಯಿತು? ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆ ಏನ್ ಮಾಡ್ತಿತ್ತು? ಎಂದು ಅವರು ಪ್ರಶ್ನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next