Advertisement

ಮಂಗಳೂರು ಉರ್ವಾ ಎಎಸ್‌ಐ ಮೇಲೆ ಗಂಭೀರ ಹಲ್ಲೆ, ಆಸ್ಪತ್ರೆಗೆ ದಾಖಲು

11:54 AM Apr 05, 2017 | udayavani editorial |

ಮಂಗಳೂರು : ಇಂದು ಬುಧವಾರ ನಸುಕಿನ ವೇಳೆ ನಗರದ ಲೇಡಿಹಿಲ್‌ ವೃತ್ತದ ಬಳಿ ಕರ್ತವ್ಯನಿರತರಾಗಿದ್ದ ಉರ್ವಾ ಠಾಣೆಯ ಎಎಸ್‌ಐ ಐತಪ್ಪ ಅವರನ್ನು ದುಷ್ಕರ್ಮಿಗಳು ಕಬ್ಬಿಣದ ಸರಳಿನಿಂದ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

Advertisement

ಇಂದು ನಸುಕಿನ ಸುಮಾರು 3.30ರ ವೇಳೆಗೆ ಬೈಕಿನಲ್ಲಿ ಬಂದಿದ್ದ  ಇಬ್ಬರು ದುಷ್ಕರ್ಮಿಗಳು ಎಎಸ್‌ಐ ಐತಪ್ಪ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾದರು.

ಹಲ್ಲೆಗೀಡಾಗಿ ತಲೆಗೆ ಗಂಭೀರ ಏಟು ಪಡೆದಿರುವ ಐತಪ್ಪ ಅವರನ್ನು ತತ್‌ಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. 

ಪೊಲೀಸ್‌ ಆಯುಕ್ತ ಚಂದ್ರಶೇಖರ್‌, ಡಿಸಿಪಿ ಡಾ. ಸಂಜೀವ್‌ ಪಾಟೀಲ್‌ ಮತ್ತು ಇತರ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಆಸ್ಪತ್ರೆಗೆ ತೆರಳಿ ಐತಪ್ಪ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. 

ಐತಪ್ಪ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next