Advertisement

ಮಂಗಳೂರು: ಕಾರಿನ ಗಾಜು ಪುಡಿಗೈದು ಹಣ ದರೋಡೆ

01:19 PM Dec 13, 2019 | Team Udayavani |

ಮಂಗಳೂರು: ಬೈಕ್ ನಲ್ಲಿ ಬಂದ ಇಬ್ಬರು ಆಗಂತುಕರಿಂದ ಚಿಲಿಂಬಿಯಲ್ಲಿ ಹಾಡು ಹಗಲೇ ಕಾರಿನ ಗ್ಲಾಸ್ ಒಡೆದು 15 ಲಕ್ಷ ಹಣ ಎಗರಿಸಿ ಪರಾರಿಯಾದ ಘಟನೆ ಶುಕ್ರವಾರ ವರದಿಯಾಗಿದೆ.

Advertisement

ಹಣವಿರಿಸಲಾಗಿದೆ ಎನ್ನಲಾದ ಕಪ್ಪು ಬಣ್ಣದ ಹುಂಡೈ ಐ 10 ಕಾರನ್ನು ಲಾಕ್ ಮಾಡಿ ನಿಲ್ಲಿಸಲಾಗಿತ್ತು . ಈ  ಸಂದರ್ಭದಲ್ಲಿ ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜು ಪುಡಿಗೈದು ಕಾರಿನೊಳಗಿಡಲಾಗಿದ್ದ ಹಣವನ್ನು ದರೋಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next