Advertisement

ಮಂಗಳೂರು ಸ್ಮಾರ್ಟ್‌ಸಿಟಿ: ಸೆಂಟ್ರಲ್‌ ಕಮಾಂಡ್‌ ಸೆಂಟರ್‌ಗೆ ಒಪ್ಪಿಗೆ

06:15 AM Mar 03, 2018 | Team Udayavani |

ಬೆಂಗಳೂರು: ಕೇಂದ್ರ-ರಾಜ್ಯ ಸರಕಾರದ ಅನುದಾನದಿಂದ ಅನುಷ್ಠಾನವಾಗಲಿರುವ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಗೆ ಪ್ರತಿಷ್ಠಿತ ಯೋಜನೆಯಾದ ಬಹುನಿರೀಕ್ಷಿತ “ಸೆಂಟ್ರಲ್‌ ಕಮಾಂಡ್‌ ಸೆಂಟರ್‌’ ನಿರ್ಮಾಣಕ್ಕೆ ಶುಕ್ರವಾರ ಅಂಗೀಕಾರ ದೊರೆತಿದೆ.  ಸ್ಮಾರ್ಟ್‌ಸಿಟಿ ಸಂಬಂಧ ಇಲ್ಲಿ ಆಯೋಜಿಸಲಾದ ಎಸ್‌ಪಿವಿ ಉನ್ನತ ಮಟ್ಟದ ಸಭೆಯಲ್ಲಿ ಈ ಅಂಗೀಕಾರ ದೊರಕಿದ್ದು, ಶೀಘ್ರದಲ್ಲಿ ಇದರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

Advertisement

ಎ.ಬಿ. ಶೆಟ್ಟಿ ವೃತ್ತದಿಂದ ಕ್ಲಾಕ್‌ ಟವರ್‌ ವರೆಗಿನ ರಸ್ತೆಯನ್ನು ಈಗಾಗಲೇ ಸ್ಮಾರ್ಟ್‌ ಸಿಟಿ ರಸ್ತೆಯನ್ನಾಗಿ ರೂಪಿಸಲು ಒಪ್ಪಿಗೆ ದೊರಕಿದ್ದು, ಇದಕ್ಕೆ ಪೂರಕವಾಗಿ ಪುರಭವನದ ಮುಂಭಾಗದಿಂದ ರೈಲ್ವೇ ನಿಲ್ದಾಣ ರಸ್ತೆಗೆ ಪ್ರವೇಶ ಪಡೆಯಲು ಅತ್ಯಾಕರ್ಷಕ ಅಂಡರ್‌ಪಾಸ್‌ ನಿರ್ಮಾಣಕ್ಕೆ ಕಾನ್ಸೆಪ್ಟ್ ಪ್ಲಾನ್‌ ರೂಪಿಸಲಾಗಿದ್ದು, ಇದಕ್ಕೆ ಸಭೆಯಲ್ಲಿ ಒಪ್ಪಿಗೆ ದೊರಕಿದೆ. ಜತೆಗೆ ಪಂಪ್‌ವೆಲ್‌ ಬಸ್‌ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ಐಟಿಡಿಟಿ ಅವರಿಂದ ವರದಿ ತರಿಸಿಕೊಳ್ಳಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಹಂಪನಕಟ್ಟೆಯಲ್ಲಿ ಈಗಾಗಲೇ ಆರಂಭಿಸಿರುವ ಕ್ಲಾಕ್‌ ಟವರ್‌ ಯೋಜನೆಗೆ ಸ್ಮಾರ್ಟ್‌ಸಿಟಿ ಅನುದಾನದಲ್ಲಿಯೇ ಹಣ ಮೀಸಲಿಡಲು ನಿರ್ಧರಿಸಲಾಯಿತು. ಇದಕ್ಕಾಗಿ 90 ಲಕ್ಷ ರೂ. ವೆಚ್ಚಕ್ಕೆ ಅನುಮೋದನೆ ದೊರಕಿದೆ. ಎಸ್‌ಪಿವಿ ಉನ್ನತ ಮಟ್ಟದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಮಲತಾ, ಪ್ರಮುಖ ಅಧಿಕಾರಿಗಳಾದ ವಿಶಾಲ್‌, ಎ.ಬಿ. ಇಬ್ರಾಹಿಂ, ಮಂಗಳೂರು ಮೇಯರ್‌ ಕವಿತಾ ಸನಿಲ್‌, ಸದಸ್ಯರಾದ ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಆಯುಕ್ತ ಮೊಹಮ್ಮದ್‌ ನಝೀರ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next