Advertisement

ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡುವುದು ಸರಿಯಲ್ಲ :ಯು.ಟಿ ಖಾದರ್

10:07 AM Dec 12, 2019 | Naveen |

ಮಂಗಳೂರು: ದೇಶ, ಧರ್ಮ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ಆಗುವುದಿಲ್ಲ, ಬಿಜೆಪಿಯ ಮುಂದಿನ ಚುನಾವಣಾ ವಿಷಯ ಇದು. ಎಲ್ಲರೂ ಒಂದಾಗಿ ಇದನ್ನು ವಿರೋಧಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

Advertisement

ಪೌರತ್ವ ಮಸೂದೆ ಜಾರಿಯ ಸಿದ್ದತೆ ವಿಚಾರವಾಗಿ ಅವರು ಬುಧವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜಕೀಯ, ಅಧಿಕಾರಕ್ಕಾಗಿ ಜನಸಾಮಾನ್ಯರ ನಡುವೆ ಅವಿಶ್ವಾಸ ಸೃಷ್ಟಿ. ದೇಶವನ್ನು ಧರ್ಮ ಆಧಾರದಲ್ಲಿ ವಿಭಜನೆ ಮಾಡುವುದು ಸರಿಯಲ್ಲ. ಈ ಮಸೂದೆ ಜಾರಿಯನ್ನು ಸರ್ಕಾರ ಕೈಬಿಡಬೇಕು. ಇಲ್ಲಿನ ರಾಜ್ಯಸರ್ಕಾರ ಇದಕ್ಕೆ ಒಪ್ಪಿಗೆ ನೀಡಬಾರದು. ಜನಸಾಮಾನ್ಯರು ಬಿಜೆಪಿ ಹಾಕಿದ ಗಾಳಕ್ಕೆ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಹೇಳಿದರು.

ಈ ಬಗ್ಗೆ ಡಿ.14ಕ್ಕೆ ಎಐಸಿಸಿ ಯಿಂದ ಐತಿಹಾಸಿಕ ರಾಲಿ ನಡೆಯಲಿದೆ. ದೆಹಲಿಯಲ್ಲಿ ಭಾರತ್ ಬಚಾವೋ ರಾಲಿ ನಡೆಯಲಿದೆ. ಜಿಲ್ಲೆಯಿಂದಲೂ ನಾಯಕರು, ಕಾರ್ಯಕರ್ತರು ತೆರಳುತ್ತಾರೆ. ಕೇಂದ್ರಸರ್ಕಾರದ ಹಲವು ವೈಫಲ್ಯದ ವಿರುದ್ದ ಈ ರಾಲಿ ನಡೆಯಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next