Advertisement

ಮಂಗಳೂರು: ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದ ಪ್ರಯಾಣಿಕರಿಗೆ ಊಟ ವಿತರಣೆ

11:21 AM Mar 27, 2020 | Naveen |

ಮಂಗಳೂರು: ಜನತಾ ಕರ್ಫ್ಯೂಗೆ ದಕ್ಷಿಣ ಕನ್ನಡ ಜಿಲ್ಲೆ ಸ್ತಬ್ದವಾಗಿದೆ. ಮಂಗಳೂರು ನಗರದಿಂದ ಯಾವ ಕಡೆಗೂ ಸರ್ಕಾರಿ, ಖಾಸಗಿ ಬಸ್ ಸಂಚಾರ ಓಡಾಟ ಇಲ್ಲ. ಈ ಮಾಹಿತಿ ತಿಳಿಯದೇ ಮಂಗಳೂರಿನ ಲಾಲ್ ಬಾಗ್ ನಲ್ಲಿರೋ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆಲ ಪ್ರಯಾಣಿಕರು ಪರದಾಡುತ್ತಿದ್ದರು.

Advertisement

ಇವರ ಪರಿಸ್ಥಿತಿಯನ್ನು ಕಂಡು ಮಂಗಳೂರಿನ ರೋಟರಿ ಕ್ಲಬ್ ನ ಸದಸ್ಯರು ಊಟದ ವ್ಯವಸ್ಥೆಯನ್ನು ಮಾಡಿ ವಿತರಿಸಿ ಮಾನವೀಯತೆ ಮೆರೆದರು. ಈ ಸಮಾಜಮುಖಿ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next