Advertisement

ಮಂಗಳೂರು: ಬ್ಯಾಂಕ್‌ನ 7.50 ಕೋಟಿ ರೂ ಹಣದೊಂದಿಗೆ ನಾಲ್ವರು ಪರಾರಿ !

05:27 PM May 12, 2017 | Team Udayavani |

ಮಂಗಳೂರು : ಇಲ್ಲಿನ ಆಕ್ಸಿಸ್‌ ಬ್ಯಾಂಕ್‌ನಿಂದ 7.50 ಕೋಟಿ ರೂಪಾಯಿ ಹಣವನ್ನು ಬೆಂಗಳೂರಿನ ಶಾಖೆಗೆ ಸಾಗಿಸುತ್ತಿದ್ದ ನಾಲ್ವರು ಸಿಬ್ಬಂದಿಗಳು ನಾಪತ್ತೆಯಾದ ಘಟನೆ ಗುರುವಾರ ನಡೆದಿದೆ.

Advertisement

ಮೇ 11 ರಂದು ಸಿಸ್‌ ಪ್ರೊಸೆಗೂರ್‌  ಹೋಲ್ಡಿಂಗ್ಸ್‌ ಸಂಸ್ಥೆಯ ಕಸ್ಟೋಡಿಯನ್‌ ಪರಶುರಾಮ , ಚಾಲಕ ಕರಿಬಸವ ಮತ್ತು ಗನ್‌ ಮ್ಯಾನ್‌ಗಳಾದ ಬಸಪ್ಪ ಮತ್ತು ಪೂವಣ್ಣ ಅವರು ತೆರಳಿದ್ದರು. ಆದರೆ ಇದುವರೆಗೆ ಬ್ಯಾಂಕ್‌ಗೆ ತಲುಪದೆ ನಾಪತ್ತೆಯಾಗಿದ್ದಾರೆ. 

ಕಂಪೆನಿಯ ಸಚಿನ್‌ ಎನ್ನುವವರು  ಕಂಕನಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಿಳಿದಿದ್ದಾರೆ.

ನಾಪತ್ತೆಯಾಗಿರುವ ನಾಲ್ವರ ಮೊಬೈಲ್‌ಗ‌ಳು ಸ್ವಿಚ್‌ ಆಫ್ ಆಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next