Advertisement

ರಾಜಕೀಯ ಲಾಭಕ್ಕಾಗಿ ಧರ್ಮದ ವಿಷಯದಲ್ಲಿ ಪ್ರಚೋದಿಸುವವರನ್ನು ಬಹಿಷ್ಕರಿಸಬೇಕು: ರಮಾನಾಥ ರೈ

12:55 PM Jan 18, 2020 | Naveen |

ಮಂಗಳೂರು: ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಪ್ರಚೋದನೆ ಹುಟ್ಟಿಸುವ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

Advertisement

ಅವರು ಶನಿವಾರದಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕನಕಪುರದಲ್ಲಿ ಏಸುವಿನ ಪ್ರತಿಮೆಯನ್ನು ಸ್ಥಾಪನೆ ವಿಚಾರವಾಗಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಲಾಭಕ್ಕಾಗಿ ಧರ್ಮದ ವಿಷಯದಲ್ಲಿ ಪ್ರಚೋದನೆ ಮಾಡುವವರನ್ನು ಸಮಾಜ ಬಹಿಷ್ಕಾರ ಮಾಡಬೇಕು. ಕಲ್ಲಡ್ಕ ಶಾಲೆಗೆ ಕೊಲ್ಲೂರಿನಿಂದ ಒಂದು ಕೆ.ಜಿ ಅಕ್ಕಿ ಹೋಗಲಿಲ್ಲ, ಎಲ್ಲ ಹಣ ಚೆಕ್ ಮೂಲಕ ಹೋಗುತ್ತಿತ್ತು. ಭಕ್ತರು ಹುಂಡಿಗೆ ಹಾಕಿದ ಹಣ ಪಡೆಯುತ್ತಿದ್ದರು. ಅಲ್ಪಸಂಖ್ಯಾತರು ಮತೀಯವಾದಿಗಳಾದರೇ ಸಮುದಾಯಕ್ಕೆ ಅಪಾಯ, ಬಹುಸಂಖ್ಯಾತರು ಮತೀಯವಾದಿಗಳಾದರೇ ದೇಶಕ್ಕೆ ಅಪಾಯ ಎಂದು ಹೇಳಿದರು.

ರಾಜ್ಯದಲ್ಲಿ ಎಸ್‌ಡಿಪಿಐ ಬ್ಯಾನ್ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ಬಿಜೆಪಿ ಲಾಭ ನಷ್ಟ ಲೆಕ್ಕ ಹಾಕಿ ತೀರ್ಮಾನ ಮಾಡಬಹುದು. ಈ ವಿಚಾರದಲ್ಲಿ ನಾನು ಪಕ್ಷದ ತೀರ್ಮಾನಕ್ಕೆ ಬದ್ದವಾಗಿದ್ದೇನೆ. ಬಿಜೆಪಿಗೆ ಲಾಭ ಇದೆ ಎಂದಾದರೇ ಬ್ಯಾನ್ ಮಾಡಬಹುದು. ನಾನು ಯಾವುದೇ ರೀತಿಯಲ್ಲಿ ಮತೀಯವಾದಕ್ಕೆ ಬೆಂಬಲ ನೀಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next