Advertisement

ಮಂಗಳೂರು:ಕಡಲಿನಲ್ಲಿ 6 ಗಂಟೆ ಈಜಿ ಪ್ರಾಣ ಉಳಿಸಿಕೊಂಡ ಮೀನುಗಾರ !

12:36 PM Aug 17, 2018 | Team Udayavani |

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಆಯತಪ್ಪಿ ಬೋಟ್‌ನಿಂದ ಕೆಳಬಿದ್ದು  6 ಗಂಟೆಗಳ ಕಾಲ ಪ್ರಾಣ ಕೈಯಲ್ಲಿ ಹಿಡಿದು ಕಡಲಿನಲ್ಲಿ ಈಜಿ ಬದುಕಿ ಬಂದ ಘಟನೆ ಗುರುವಾರ ರಾತ್ರಿ ನಡೆದಿದೆ. 

Advertisement

ತಮಿಳುನಾಡು ಮೂಲದ ಮೀನುಗಾರ ನಾಗರಾಜ್‌ ಬೋಟ್‌ನಿಂದ ಆಕಸ್ಮಿಕವಾಗಿ ಕೆಳ ಬಿದ್ದಿದ್ದಾರೆ.  ಬೋಟ್‌ನಲ್ಲಿದ್ದವರು ಇತರ ಬೋಟ್‌ನವರಿಗೆ ವಿಚಾರ ತಿಳಿಸಿದ್ದಾರೆ. 40 ಕ್ಕೂ ಹೆಚ್ಚು ಬೋಟ್‌ನಲ್ಲಿದ್ದ ಮೀನುಗಾಗರು ಹುಡುಕಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. 

ಈ ವಿಚಾರವನ್ನು ಎನ್‌ಎಮ್‌ಪಿಟಿಯಲ್ಲಿರುವ ಕೋಸ್ಟ್‌ ಗಾರ್ಡ್‌ ಸಿಬಂದಿಗೆ ತಿಳಿಸಿದಾಗ ಹುಡುಕಾಟಕ್ಕಿಳಿದಿದ್ದು, 6 ಗಂಟೆಗಳ ಬಳಿಕ ನಾಗರಾಜ್‌ನನ್ನು ರಕ್ಷಿಸಿ ಪಣಂಬೂರಿಗೆ ಕರೆ ತಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next