Advertisement

Mangaluru: ಮತ್ತೆ 13 ಮಂದಿಯ ಗಡೀಪಾರು

01:06 PM Mar 27, 2024 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಮತ್ತೆ 13 ಮಂದಿ ಅಪರಾಧ ಹಿನ್ನೆಲೆಯವರನ್ನು ಗಡೀಪಾರು ಮಾಡಿ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Advertisement

ಬೋಳಾರದ ಜ್ಞಾನೇಶ್‌ ನಾಯಕ್‌ (25), ಕುದ್ರೋಳಿಯ ಫ‌ಹಾದ್‌ (25), ಉಳ್ಳಾಲ ಮೊಗವೀರ ಪಟ್ಣದ ಧನುಷ್‌ ಆಲಿಯಾಸ್‌ ರಮಿತ್‌ ರಾಜ್‌ (30), ಕಾವೂರಿನ ಮೊಹಮ್ಮದ್‌ ಸುಹೇಬ್‌ (28), ಮೂಡುಶೆಡ್ಡೆಯ ದೀಪಕ್‌ ಆಲಿಯಾಸ್‌ ದೀಪು (38), ಕಾಟಿಪಳ್ಳ ಕೃಷ್ಣಾಪುರದ ಸಾಹಿಲ್‌ ಇಸ್ಮಾಯಿಲ್‌ (27), ಉಳ್ಳಾಲ ಬಸ್ತಿಪಡು³ವಿನ ಮೊಹಮ್ಮದ್‌ ಶಕೀರ್‌ (30), ಉಳ್ಳಾಲ ಮೇಲಂಗಡಿಯ ಇಬ್ರಾಹಿಂ ಖಲೀಲ್‌ (22), ಕುದ್ರೋಳಿಯ ಧನುಷ್‌ (28), ಬಜಾಲ್‌ ನಂತೂರಿನ ನೌಫಾಲ್‌ ಆಲಿಯಾಸ್‌ ಟೊಪ್ಪಿ ನೌಫಾಲ್‌ (35), ಮರೋಳಿಯ ಹವಿತ್‌ ಪೂಜಾರಿ (28), ಅರ್ಕುಳದ ಕೌಶಿಕ್‌ ನಿಹಾಲ್‌ (24) ಮತ್ತು ಬೆಳುವಾಯಿಯ ಸಂತೋಷ್‌ ಶೆಟ್ಟಿ (34) ಅವರನ್ನು ಗಡೀಪಾರು ಮಾಡಲಾಗಿದೆ.

ಇದರೊಂದಿಗೆ ಚುನಾವಣೆ ಹಿನ್ನೆಲೆಯಲ್ಲಿ ಇದುವರೆಗೆ ಒಟ್ಟು 51 ಮಂದಿಯನ್ನು ಗಡೀಪಾರು ಮಾಡಿದಂತಾಗಿದೆ.

ಮತ್ತೆ ನಾಲ್ವರ ವಿರುದ್ಧ ಗೂಂಡಾ ಕಾಯ್ದೆ

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಮತ್ತೆ ನಾಲ್ವರ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗಿದೆ.

Advertisement

ಸೋಮೇಶ್ವರ ನೆಹರು ನಗರ ನಿವಾಸಿ ಹೇಮಚಂದ್ರ ಯಾನೆ ಪ್ರಜ್ವಲ್‌ ಪೂಜಾರಿ (29), ಕರಿಯಂಗಳ ಗ್ರಾಮದ ಗೌಸಿಯಾ ಮಸೀದಿ ಬಳಿಯ ನಿವಾಸಿ ನವಾಜ್‌ ಯಾನೆ ಮುಡಿಪು ನವಾಜ್‌ (36), ಕುದ್ರೋಳಿ ನಿವಾಸಿ ಅನೀಶ್‌ ಯಾನೆ ಅಶ್ರಫ್‌ (26), ಬೋಳೂರು ನಿವಾಸಿ ಚರಣ್‌ ಶೇಟ್‌ ಯಾನೆ ಚರಣ್‌ ಪಾಲ್‌ (39) ಗೂಂಡಾ ಕಾಯ್ದೆಯಡಿ ಬಂಧಿತರು.

ಆರೋಪಿಗಳ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ ಮೊದಲಾದ 10ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next