Advertisement

ಮಂಗಳೂರು ಘಟನೆ: ಸಿಬಿಐ ತನಿಖೆಗೆ ಆಗ್ರಹ

10:37 PM Dec 23, 2019 | Team Udayavani |

ಬೆಂಗಳೂರು: ಮಂಗಳೂರು ಘಟನೆಗೆ ಬಿಜೆಪಿ ನೇರ ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್‌ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಆದರೆ, ಇದರಿಂದ ಸತ್ಯ ಹೊರಬರುವುದಿಲ್ಲ. ಹಾಗಾಗಿ ಸಿಬಿಐಗೆ ವಹಿಸಬೇಕೆಂದು ಆಗ್ರಹಪಡಿಸಿದರು.

Advertisement

ಕೇರಳದಿಂದ ಕಪ್ಪುಪಟ್ಟಿ ಕಟ್ಟಿಕೊಂಡು ಬಂದವರು ಹಿಂಸಾಚಾರ ನಡೆಸಿದರು ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಗುಪ್ತಚರ ಇಲಾಖೆ ಸಿಎಂ ಬಳಿಯೇ ಇದೆಯಲ್ಲ. ಕಪ್ಪುಪಟ್ಟಿ ಧರಿಸಿದವರು ಯಾರು, ಎಲ್ಲಿಂದ ಬಂದವರು ಅನ್ನೋದು ಗೊತ್ತಾಗಲಿಲ್ವಾ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ಷಾ ಅವರಿಗೆ ತಾಳ ತಪ್ಪಿದಂತೆ, ರಾಜ್ಯದಲ್ಲೂ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ನಡುವೆ ತಾಳಮೇಳ ಇಲ್ಲ. ಸಿಎಂ ಒಂದು ಹೇಳಿದರೆ, ಗೃಹ ಸಚಿವರು ಮತ್ತೇನೊ ಹೇಳುತ್ತಾರೆ. ಹೀಗಾಗಿ ಮಂಗಳೂರಿನಲ್ಲಿ ಅವಘಡ ಜರುಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next