Advertisement

Mangalore: ಅಸಭ್ಯವಾಗಿ ವರ್ತಿಸುತ್ತಿದ್ದಾತನಿಗೆ ಥಳಿತ

12:56 AM Nov 10, 2023 | Team Udayavani |

ಮಂಗಳೂರು: ಬೋಂದೆಲ್‌ ಚರ್ಚ್‌ ಬಳಿ ಕಲ್ಲು ತೂರಾಟ ನಡೆಸುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದು, ಬಳಿಕ ಪೊಲೀಸರು ಆಗಮಿಸಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ಗಡ್ಡ, ಕೂದಲು ಬೆಳೆಸಿಕೊಂಡು ಅಲೆಮಾರಿಯಂತೆ ಕಂಡು ಬರುತ್ತಿದ್ದ ವ್ಯಕ್ತಿ ವಿಜಯಪುರ ಮೂಲದವನಾಗಿದ್ದು, ಹೆಸರು ಸುಭಾಷ್‌ ಎಂದು ತಿಳಿದು ಬಂದಿದೆ. ಆತನ ಅಸಭ್ಯ ವರ್ತನೆ, ಮಾತು ಮತ್ತು ಕಲ್ಲು ತೂರಾಟದಿಂದ ಸ್ಥಳೀಯರು ಆಕ್ರೋಶಗೊಂಡು ಕೈ ಮತ್ತು ಕಾಲನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. ಬಳಿಕ ಪೊಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆತ ಮಾನಸಿಕ ಅಸ್ವಸ್ಥ ವ್ಯಕ್ತಿ ಎಂದು ತಿಳಿದುಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next