Advertisement
ಸುಬ್ರಹ್ಮಣ್ಯ, ಸುಳ್ಯದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಸುಳ್ಯ ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಸಂಜೆ 4.30ಕ್ಕೆ ಆರಂಭವಾದ ಮಳೆ 6.30 ತನಕವೂ ಮುಂದುಧಿವರಿಯಿತು. ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಜೆಯೂ ಮಳೆಯಾಗಿತ್ತು. ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು ಪರಿಸರದಲ್ಲಿ ಸಂಜೆ ಮಳೆ ಸುರಿದಿದೆ. ಉಜಿರೆಯ ಸಿದ್ಧವನ ಸಮೀಪ ಬುಧವಾರ ಸಂಜೆ ಬೃಹತ್ ಗಾತ್ರದ ಮರವೊಂದು ಗಾಳಿಗೆ ಮುರಿದುಬಿದ್ದಿದೆ. ಈಶಾನ್ಯ ಸಾರಿಗೆ ಬಸ್ಸೊಂದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದೆ.
ಮಡಿಕೇರಿ: ಬಿಸಿಲ ಬೇಗೆಗೆ ಮೈಯೊಡ್ಡಿದ್ದ ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಕೊಂಚ ತಂಪಾಗಿದೆ.
Related Articles
Advertisement
ಕಾಡ್ಗಿಚ್ಚಿನಿಂದ ನಾಶವಾಗಿದ್ದ ಅರಣ್ಯ ಪ್ರದೇಶದ ಗಿಡಮರಗಳು ಮಳೆಯಿಂದಾಗಿ ಕೊಂಚ ಚೇತರಿಸಿಕೊಂಡಿವೆ. ಮಡಿಕೇರಿಯಲ್ಲಿ ಮೋಡದ ವಾತಾವರಣ ಮುಂದುವರಿದಿದೆ.