Advertisement

Mangaluru:ಅಟ್ಟುಕಲ್‌ ದೇವಸ್ಥಾನದಲ್ಲಿ ಪೊಂಗಲ್‌ ಹಿನ್ನೆಲೆ ರೈಲುಗಳಿಗೆ ಹೆಚ್ಚುವರಿ ನಿಲುಗಡೆ

11:46 PM Feb 22, 2024 | Team Udayavani |

ಮಂಗಳೂರು: ಅಟ್ಟುಕಲ್‌ ಭಗವತಿ ದೇವಸ್ಥಾನದಲ್ಲಿ ಪೊಂಗಲ್‌ ಹಿನ್ನೆಲೆ ರೈಲುಗಳಿಗೆ ಹೆಚ್ಚುವರಿ ನಿಲುಗಡೆ
ಮಂಗಳೂರು: ಕೇರಳದ ಅಟ್ಟುಕಲ್‌ ಭಗವತಿ ದೇವಸ್ಥಾನದಲ್ಲಿ ಪೊಂಗಲ್‌ ಮಹೋತ್ಸವ ಹಿನ್ನೆಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಪ್ರಮುಖ ರೈಲುಗಳಿಗೆ ಹೆಚ್ಚುವರಿ ನಿಲುಗಡೆ ನೀಡಲಾಗಿದೆ.

Advertisement

ಫೆ. 24ರಂದು ಸಂಜೆ 4.10ಕ್ಕೆ ಮಧುರೈ ಜಂಕ್ಷನ್‌ನಿಂದ ಹೊರಡುವ ಮಧುರೈ ಜಂಕ್ಷನ್‌-ತಿರುವನಂತಪುರ ಸೆಂಟ್ರಲ್‌ ಅಮೃತ ಎಕ್ಸ್‌ಪ್ರೆಸ್‌ ರೈಲಿಗೆ ಪರವೂರ್‌ ಮತ್ತು ಚಿರಯಂಕೀಝುದಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗಿದೆ.
ಫೆ. 24ರಂದು ಸಂಜೆ 5.30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್‌-ತಿರುವನಂತಪುರ ಸೆಂಟ್ರಲ್‌ ಮಾವೇಲಿ ಎಕ್ಸ್‌ಪ್ರೆಸ್‌ ರೈಲು ಕಡಕಾವೂರು ಮತ್ತು ಚಿರಯಂಕೀಝುದಲ್ಲಿ ಹೆಚ್ಚುವರಿ ನಿಲುಗಡೆ ಒದಗಿಸಲಿದೆ.

ಫೆ. 24ರಂದು ಮಧ್ಯಾಹ್ನ 3.20ಕ್ಕೆ ಡಾ| ಎಂಜಿಆರ್‌ ಚೆನ್ನೈ ಸೆಂಟ್ರಲ್‌ನಿಂದ ಹೊರಡುವ ಡಾ| ಎಂಜಿಆರ್‌ ಚೆನ್ನೈ ಸೆಂಟ್ರಲ್‌-ತಿರುವನಂತಪುರ ಸೆಂಟ್ರಲ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಿರಯಂಕೀಝುದಲ್ಲಿ ಹೆಚ್ಚುವರಿ ನಿಲುಗಡೆಯನ್ನು ಒದಗಿಸಲಾಗುತ್ತದೆ. ಫೆ. 23ರ ರಾತ್ರಿ 9.25ಕ್ಕೆ ಜಾಮ್‌ನಗರದಿಂದ ಹೊರಡುವ ಜಾಮ್‌ನಗರ-ತಿರುನೆಲ್ವೇಲಿ ಎಕ್ಸ್‌ಪ್ರೆಸ್‌ ರೈಲಿಗೆ ಬಲರಾಮಪುರಂ ಮತ್ತು ನೆಯ್ಯಂಟಿಂಕರಾದಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗುತ್ತದೆ ಎಂದು ರೈಲ್ವೇ ಇಲಾಖೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next