Advertisement

ಕಳ್ಳರ ಕೈಚಳಕ: ಬ್ಯಾಂಕ್‌ಗೆ ಜಮೆ ಮಾಡಲು ತಂದಿದ್ದ ಹುಂಡಿಯ ಹಣವನ್ನೇ ಎಗರಿಸಿದ ಕಳ್ಳರು

08:00 PM Mar 17, 2021 | Team Udayavani |

ಮಂಡ್ಯ: ಕಾಳಿಕಾಂಬ ದೇವಾಲಯದ ಕಾಣಿಕೆ ಹುಂಡಿ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡುವ ಸಂದರ್ಭದಲ್ಲಿ ದುಷ್ಕರ್ಮಿಗಳು ಹಣ ಲಪಟಾಯಿಸಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

Advertisement

ದೇವಾಲಯದಲ್ಲಿ ಸಂಗ್ರಹವಾಗಿದ್ದ 1.80 ಲಕ್ಷ ರೂ. ಕಾಣಿಕೆ ಹುಂಡಿಯನ್ನು ಗುಡ್ಡಪ್ಪ ಮಂಜುಗೌಡ ಎಂಬುವವರು ನಗರದ ಕೆನರಾ ಬ್ಯಾಂಕ್‌ನಲ್ಲಿ ಮಂಗಳವಾರ ಜಮೆ ಮಾಡಲು ಹೋಗಿದ್ದಾರೆ. ಬ್ಯಾಂಕ್ ಅನ್ನು ಪ್ರವೇಶಿಸಿದ ಮೇಲೆ ಅಲ್ಲೇ ಕುಳಿತಿದ್ದ ಮೂವರು ದುಷ್ಕರ್ಮಿಗಳು ಮಂಜುವಿನ ಬಳಿ ಹೋಗಿ ಹತ್ತು ರೂಪಾಯಿ ಕೆಳಗಡೆ ಬೀಳಿಸಿ ಅವರ ಗಮನ ಬೇರೆಡೆ ಸೆಳೆದು ಹಣದ ಬ್ಯಾಗನ್ನು ಕಿತ್ತು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ವೇಳೆ ಗುಡ್ಡಪ್ಪ ಮಂಜುಗೌಡ ಅವರು ಕಿರುಚಿಕೊಂಡರೂ ಪ್ರಯೋಜನವಾಗಲಿಲ್ಲ. ಸ್ಥಳೀಯರೆಲ್ಲರೂ ಬಂದು ನೋಡುವಷ್ಟರಲ್ಲಿ ದುಷ್ಕರ್ಮಿಗಳು ಹಣದ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದರು. ನಂತರ ಪೊಲೀಸರಿಗೆ ವಿಷಯ ತಿಳಿಸಲಾಯಿತು, ಸ್ಥಳಕ್ಕೆ ಆಗಮಿಸಿದ ಸಬ್‌ ಇನ್ಸ್ ಪೆಕ್ಟರ್ ವೆಂಕಟೇಶ್ ಕೆಲಕಾಲ ಪರಿಶೀಲನೆ ನಡೆಸಿದರು. ಈ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ :ರಾಜ್ಯದಲ್ಲಿ ಹಗಲು ಅಥವಾ ರಾತ್ರಿ ಕರ್ಫ್ಯೂ ಇಲ್ಲ : ಮಾಸ್ಕ್ ಕಡ್ಡಾಯ, ತಪ್ಪಿದರೆ ಕ್ರಮ ; BSY

Advertisement

Udayavani is now on Telegram. Click here to join our channel and stay updated with the latest news.

Next