Advertisement

Mandya Open: ಮಾಧ್ವಿನ್‌, ಸಿದ್ಧಾರ್ಥ್ ಕ್ವಾರ್ಟರ್‌ಫೈನಲಿಗೆ

12:21 AM Jan 12, 2024 | Team Udayavani |

ಮಂಡ್ಯ: ನಗರದ ಪಿಇಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಟಿಎಫ್‌ ಮಂಡ್ಯ ಓಪನ್‌ ಟೆನಿಸ್‌ ಕೂಟದಲ್ಲಿ ಭಾರತದ ಮೂವರು ಆಟಗಾರರಾದ ಮಾಧ್ವಿನ್‌ ಕಾಮತ್‌, ಸಿದ್ಧಾರ್ಥ ವಿಶ್ವಕರ್ಮ ಹಾಗೂ ಕರಣ್‌ ಸಿಂಗ್‌ ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿದ್ದಾರೆ.

Advertisement

ಅರ್ಹತಾ ಸುತ್ತು ದಾಟಿ ಬಂದಿ ರುವ ಮಾಧ್ವಿನ್‌ ಕಾಮತ್‌, ಗುರುವಾರ ಸ್ಮರಣೀಯ ಆಟದ ಪ್ರದರ್ಶನ ನೀಡಿದರು. ಗುಜರಾತಿನ ಈ ಪ್ರತಿಭೆ ಕೊರಿಯಾದ ಯುನ್‌ ಸಿಯೊಕ್‌ ಜಾಂಗ್‌ ಎದುರು ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದರು.
ಆಟಗಾರರಿಬ್ಬರೂ ತಲಾ ಒಂದೊಂದು ಸೆಟ್‌ ಜಯಿಸಿದ್ದರು. ಟೈಬ್ರೇಕರ್‌ನಲ್ಲಿ ಮಾಧ್ವಿನ್‌ 3-2 ಅಂಕಗಳಿಂದ ಮುಂದಿದ್ದರು. ಆ ವೇಳೆ ಎದುರಾಳಿ ಯುನ್‌ ಸಿಯೊಕ್‌ ಜಾಂಗ್‌, ಸ್ನಾಯುಸೆಳೆತಕ್ಕೆ ಒಳಗಾದ ಕಾರಣ ಪಂದ್ಯ ಬಿಟ್ಟುಕೊಟ್ಟರು.
ಸಿದ್ಧಾರ್ಥ ವಿಶ್ವಕರ್ಮ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದವರೇ ಆದ ಮನೀಷ್‌ ಸುರೇಶಕುಮಾರ್‌ ಎದುರು ತೀವ್ರವಾಗಿ ಸೆಣಸಾಡಿ 7-5, 6-4 ಅಂಕಗಳಿಂದ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next