Advertisement

ಸರ್ಕಾರದಲ್ಲಿ ಕೈ-ಜೆಡಿಎಸ್‌ ಮುಖಂಡರ ಮೇಲುಗೈ

07:47 PM Jul 07, 2021 | Team Udayavani |

ಮದ್ದೂರು: ಪಕ್ಷದ ಕಾರ್ಯಕರ್ತರ ಹಿತದೃಷ್ಟಿಯಿಂದನೇರ ಮಾತುಗಳಲ್ಲಿ ಮಾಧ್ಯಮದವರೂ ಸೇರಿದಂತೆವರಿಷ್ಠರ ಮುಂದೆ ತಮ್ಮ ಅನಿಸಿಕೆ ಪಕ್ಷಬಲವರ್ಧನೆಗಾಗಿ ಹೊರತು ಮತ್ಯಾವ ಉದ್ದೇಶತಮ್ಮದಲ್ಲವೆಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಸ್ಪಷ್ಟಪಡಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದಅವರು, ಬಿಜೆಪಿ ಪಕ್ಷ ಪ್ರಸ್ತುತ ಅಧಿಕಾರಕ್ಕೆ ಬಂದದಿನದಿಂದಲೂ ಜೆಡಿಎಸ್‌ ಸೇರಿದಂತೆ ಕೆಲ ಕಾಂಗ್ರೆಸ್‌ಮುಖಂಡರ ಕೈ ಮೇಲಾಗುತ್ತಿದ್ದು, ಬಿಜೆಪಿ ಸಂಘಟನೆಮತ್ತು ಕಾರ್ಯಕರ್ತರಿಗೆ ಹಿನ್ನಡೆ ಉಂಟಾಗುತ್ತಿರುವುದಾಗಿ ಈ ಕುರಿತು ವರಿಷ್ಠರೊಡನೆ ಚರ್ಚಿಸಿರುವಕುರಿತಾಗಿ ವಿವರಿಸಿದರು.

ರಾಜ್ಯದಲ್ಲಿ ತಮ್ಮ ಅಸ್ತಿತ್ವಕ್ಕಾಗಿಹೆಣಗಾಡುತ್ತಿರುವಕಾಂಗ್ರೆಸ್‌ಮತ್ತುಜೆಡಿಎಸ್‌ಪಕ್ಷಗಳನಡುವೆ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಬಿಜೆಪಿಬಲವರ್ಧನೆಗೆ ಅವಕಾಶವಿದ್ದು, ಒಳ ಒಪ್ಪಂದದಹಿನ್ನೆಲೆಯಲ್ಲಿ ಕಾರ್ಯಕರ್ತರು ವ್ಯಕ್ತಪಡಿಸಿದ ಬೇಸರವನ್ನು ತಾವು ಮಾತಿನ ರೂಪದಲ್ಲಿ ಹೊರ ಹಾಕುತ್ತಿರುವುದಾಗಿ ತಿಳಿಸಿದರು.

ಮೀಸಲಿನಲ್ಲಿ ಮೇಲುಗೈ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾದ ಮಾಜಿಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮಇರುವಿಕೆಯನ್ನು ತೋರ್ಪಡಿಸಲು ವಾಮ ಮಾರ್ಗಗಳನ್ನು ಅನುಸರಿಸುತ್ತಿದ್ದು, ಈ ಕಾರಣದಿಂದಲೇಜಿಪಂ, ತಾಪಂ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿಮೇಲುಗೈ ಸಾಧಿಸಿರುವುದಾಗಿ ಹೇಳಿದರು.ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತುನೀಡುವ ಮೂಲಕ ರಾಷ್ಟ್ರದ ಮೊದಲ ಸ್ಥಾನ ಪಡೆಯುವವಿಶ್ವಾಸವ್ಯಕ್ತಪಡಿಸಿದ ಸಚಿವಯೋಗೇಶ್ವರ್‌14.5ಜಿಡಿಪಿಗಳಿಕೆಯಲ್ಲಿ ಇಲಾಖೆ ಮುಂದಿದೆ ಎಂದರು. ಮಂಡ್ಯಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ100 ಕೋಟಿ ಮೊತ್ತದ ಕಾಮಗಾರಿ ಆಮೆ ವೇಗದಲ್ಲಿಸಾಗಿದ್ದು, ಮುಂದಿನ ವಾರದಲ್ಲಿ ಈ ಸಂಬಂಧ ಮಂಡ್ಯಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ  ಸಭೆ ಕರೆದು ಚುರುಕುಮುಟ್ಟಿಸುವಕುರಿತು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next