Advertisement

Mandya: ಟಿಸಿ ಅಳವಡಿಸಲು ಲಂಚಕ್ಕೆ ಬೇಡಿಕೆ… ಲೋಕಾಯುಕ್ತಾ ಬಲೆಗೆ ಬಿದ್ದ ಚೆಸ್ಕಾಂ ಅಧಿಕಾರಿ

04:41 PM Dec 13, 2023 | Team Udayavani |

ಮಂಡ್ಯ: ಟಿಸಿ ಅಳವಡಿಸಲು ರೈತನಿಂದ ಲಂಚ ಪಡೆಯುತ್ತಿದ್ದ ಚೆಸ್ಕಾಂ ಅಧಿಕಾರಿಯೊಬ್ಬ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮಂಡ್ಯದ ಮಳವಳ್ಳಿಯ ಹಲಗೂರಿನಲ್ಲಿ ಬುಧವಾರ ನಡೆದಿದೆ.

Advertisement

ಚೆಸ್ಕಾಂನ ಎಇ ಚಂದ್ರಶೇಖರ್ ಲೋಕಾಯುಕ್ತಾ ಬಲೆಗೆ ಬಿದ್ದ ಅಧಿಕಾರಿ.

ಚಂದ್ರಶೇಖರ್ ಮಳವಳ್ಳಿಯ ಲಿಂಗಪಟ್ಟಣದ ರೈತ ಪುಟ್ಟಸ್ವಾಮಿ ಬಳಿ ಟಿಸಿ ಅಳವಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಈ ಕುರಿತು ರೈತ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಅದರಂತೆ ಇಂದು ರೈತ ಪುಟ್ಟಸ್ವಾಮಿ ಅವರು ಚೆಸ್ಕಾಂ ಅಧಿಕಾರಿ ಚಂದ್ರಶೇಖರ್ ಅವರಿಗೆ ಲಂಚದ ಹಣ ನೀಡುವ ವೇಳೆ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಚೆಸ್ಕಾಂ ಅಧಿಕಾರಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: Chhattisgarh;ವಿಷ್ಣುದೇವ ಸಾಯಿ ಪ್ರಮಾಣವಚನ ಸ್ವೀಕಾರ:ಪ್ರಧಾನಿ ಮೋದಿ ಭಾಗಿ; Watch

Advertisement

Udayavani is now on Telegram. Click here to join our channel and stay updated with the latest news.

Next