Advertisement

“ನಾನು,ಡಿಕೆಶಿ ನಿಜವಾದ ಜೋಡೆತ್ತುಗಳು’

11:17 PM Mar 25, 2019 | Sriram |

ಮಂಡ್ಯ: “ರಾಜಕೀಯ ಚಕ್ರವ್ಯೂಹದೊಳಗೆ ಅಭಿಮನ್ಯುವಾಗಿ ಪ್ರವೇಶಿಸಿರುವ ನಿಖೀಲ್‌ಗೆ ಅರ್ಜುನನಂತೆ ಬೆಂಗಾವಲಾಗಿ ನಾನಿರುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಯ ನೀಡಿದರು.

Advertisement

ಮಂಡ್ಯ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ ಬಳಿಕ ಕಾವೇರಿವನದ ಬಳಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಚಕ್ರವ್ಯೂಹವನ್ನು ಬೇಧಿಸಲು ಅಭಿಮನ್ಯು ಜತೆ ತಂದೆ ಅರ್ಜುನನಿರಲಿಲ್ಲ. ಆದರೆ, ರಾಜಕೀಯ ಕುರುಕ್ಷೇತ್ರದ ಚುನಾವಣೆ ಎಂಬ ಚಕ್ರವ್ಯೂಹ ಬೇಧಿಸಲು ಅರ್ಜುನನಾಗಿ ನನ್ನ ಮಗನ ಜತೆ ನಾನಿದ್ದೇನೆ. ರಾಜಕಿಯ ಚಕ್ರವ್ಯೂಹದಲ್ಲಿ ಅಭಿಮನ್ಯು ನಿಖೀಲ್‌ನನ್ನು ಹಿಮ್ಮೆಟ್ಟಿಸಲು ಯಾರಿಂದಲೂ ಸಾಧ್ಯವಿಲ್ಲ. ಕುತಂತ್ರ ರಾಜಕಾರಣ ಇಲ್ಲಿ ನಡೆಯೋದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಡಿಕೆಶಿ ನಾನೇ ನಿಜವಾದ ಜೋಡೆತ್ತುಗಳು: ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿರುವುದು ಹೊಲ ಉಳುವ ಜೋಡೆತ್ತುಗಳಲ್ಲ. ಅವು ಮಧ್ಯರಾತ್ರಿ ಹೊಲದಲ್ಲಿ ಬೆಳೆದಿರುವ ಬೆಳೆಯನ್ನು ಮೇಯ್ದು ಹೋಗುವ ಎತ್ತುಗಳಷ್ಟೇ. ಆದರೆ, ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ನಾನು ರಾಜ್ಯ ರಾಜಕೀಯದ ನಿಜವಾದ ಜೋಡೆ ತ್ತುಗಳು ಎಂದು ಸಿಎಂ ಕುಮಾರಸ್ವಾಮಿ ನಟರಾದ ದರ್ಶನ್‌ ಮತ್ತು ಯಶ್‌ಗೆ ಟಾಂಗ್‌ ನೀಡಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಜೋಡೆತ್ತು ಗಳು ನಾವು. ನಿಮ್ಮ ಮನೆಯ ಮಕ್ಕಳು. ಡಿಕೆಶಿ ಮತ್ತು ನಾನು ಹಿಂದೆ ರಾಜಕೀಯವಾಗಿ ಪರಸ್ಪರ ಎದುರಾಗಿ ಸುದೀರ್ಘ‌ ಹೋರಾಟ ಮಾಡಿದ್ದೇವೆ. ಆದರೀಗ ಮೈತ್ರಿ ಸರಕಾರವನ್ನು ಯಶಸ್ವಿಯಾಗಿ ನಡೆಸಲು ಸಚಿವ ಶಿವಕುಮಾರ್‌ ಹಾಗೂ ನಾನು ಅಣ್ಣ ತಮ್ಮನ ರೀತಿಯ ಹೊಸದಾಗಿ ರಾಜಕೀಯ ಶುರು ಮಾಡಿದ್ದೇವೆ. ಡಿಕೆಶಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಅಸ್ಥಿರತೆಯ ಪರಿಸ್ಥಿತಿಯನ್ನು ಡಿಕೆಶಿ ನನಗೆ ಬೆಂಗಾವಲಾಗಿ ನನ್ನ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next