Advertisement

ಮೋದಿ,ರಾಹುಲ್‌ ಕ್ಷೇತ್ರಗಳಿಗಿಂತಲೂ ಮಂಡ್ಯ ಹೆಚ್ಚು ಸುದ್ದಿಯಾಗಿದೆ:ಸಿಎಂ

02:36 PM Mar 20, 2019 | Team Udayavani |

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಂದಲೂ ಹೆಚ್ಚು ಪ್ರಧಾನ್ಯತೆ ಪಡೆದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿತ ಅವರು, ನಾವು ಮಂಡ್ಯದಲ್ಲಿ ಯಾರ ಬಗ್ಗೆಯೂ ಹೆದರುವುದಿಲ್ಲ. ನನಗೆ ನಮ್ಮ  ಕಾರ್ಯಕರ್ತರು, ನಮ್ಮ ಜನರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರೇ ನನ್ನ ಮಗನನ್ನು ಗೆಲ್ಲಿಸುತ್ತಾರೆ ಎಂದರು. 

ನಾನು ನಾಯಕರಿಗೆ ಯಾರ ಬಗ್ಗೆಯೂ ಲಘುವಾಗಿ ಮಾತನಾಡದಂತೆ ಸೂಚಿಸಿದ್ದೇನೆ ಎಂದರು. 

ಇದೇ ವೇಳೆ ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ . ನಟರಾದರೇನು ಎಂದು ಪರೋಕ್ಷವಾಗಿ ದರ್ಶನ್‌ ಮತ್ತು ಯಶ್‌ ಅವರಿಗೆ ಟಾಂಗ್‌ ನೀಡಿದರು. 

ನಾಳೆ ನಿಖಿಲ್ ಜೆಡಿಎಸ್‌ ಅಭ್ಯರ್ಥಿಯಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದು, ಮಾರ್ಚ್‌ 25 ರಂದು  ಜನರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next