Advertisement

Mandya ಹೆಣ್ಣು ಭ್ರೂಣ ಪತ್ತೆ, ಹತ್ಯೆ: ಮತ್ತೆ ಮೂವರ ಬಂಧನ

08:57 PM Sep 10, 2024 | Team Udayavani |

ಮಂಡ್ಯ: ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೆ ಮೂವರನ್ನು ಬಂಧಿ ಸಿದ್ದು, ಇದುವರೆಗೂ ಪ್ರಕರಣದಲ್ಲಿ ಒಟ್ಟು 36 ಮಂದಿಯನ್ನು ಬಂಧಿಸಲಾಗಿದೆ.

Advertisement

ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ನವೀನ್‌ ಎಚ್‌.ಕೆ., ಹರಳಹಳ್ಳಿಯ ಗ್ರಾಮದ ಜಬ್ಬರ್‌ ಆಲಿಯಾಸ್‌ ಬಾಬು, ಮೈಸೂರಿನ ರಾಘವೇಂದ್ರ ಬಡಾವಣೆಯ ನಿವಾಸಿ ಹಾಗೂ ಕೆ.ಆರ್‌. ನಗರದಲ್ಲಿ ಡಯಾಗ್ನೊಸ್ಟಿಕ್‌ ಸೆಂಟರ್‌ ನಡೆಸುತ್ತಿದ್ದ ಜಿ.ಎನ್‌. ಶಂಕರ್‌ ಬಂಧಿತ ಆರೋಪಿಗಳಾಗಿದ್ದಾರೆ.

ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ 7 ಮಂದಿಯ ಪೈಕಿ ಶನಿವಾರ ಮೂವರು ಹಾಗೂ ಸೋಮವಾರ ಸಂಜೆ ಮೂವರನ್ನು ಬಂಧಿಸಲಾಗಿದೆ. ಇನ್ನುಳಿದ ಮತ್ತೂಬ್ಬನನ್ನು ಬಂ ಧಿಸಲು ಪೊಲೀಸರು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next